Advertisement

Bhopal: ಗುರುವಿಗೇ ಗುಂಡಿಟ್ಟ ಶಿಷ್ಯರು !

09:19 PM Jun 23, 2023 | Team Udayavani |

ಭೋಪಾಲ್‌: ಗುರುವಿಗೆ ತಿರುಮಂತ್ರ ಎನ್ನುವ ಮಾತಿಗೆ ತಕ್ಕಂತೆ, ವಿದ್ಯೆ ಕೊಟ್ಟ ಶಿಕ್ಷಕರಿಗೆ ಕೇಡು ಬಯಸುವ ಶಿಷ್ಯರೂ ಇದ್ದಾರೆ! ಅಂಥದ್ದೊಂದು ಪ್ರಕರಣಕ್ಕೆ ಮಧ್ಯಪ್ರದೇಶ ಸಾಕ್ಷಿಯಾಗಿದೆ. ಗುರುವನ್ನು ಮಾತನಾಡಿಸುವ ನೆಪದಲ್ಲಿ ಬಂದ ಶಿಷ್ಯರಿಬ್ಬರು ನಗುನಗುತ್ತಲೇ ಗುರುವಿಗೇ ಗುಂಡುಹಾರಿಸಿ ಪರಾರಿಯಾಗಿದ್ದಾರೆ.

Advertisement

ಈ ಘಟನೆ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಮೊರೆನಾ ಜಿಲ್ಲೆಯ ಜೌರಾರೋಡ್‌ ನಗರದಲ್ಲಿ ಗಿರ್ವಾರ್‌ ಸಿಂಗ್‌ ಎಂಬವರು ಕೋಚಿಂಗ್‌ ಸೆಂಟರ್‌ ಒಂದನ್ನ ನಡೆಸುತ್ತಿದ್ದು, ನೂರಾರು ವಿದ್ಯಾರ್ಥಿಗಳು ಇವರ ಬಳಿ ಪಾಠ ಕಲಿತಿದ್ದಾರೆ. ಇದೇ ರೀತಿ ಇವರ ಬಳಿಯೇ 12ನೇ ತರಗತಿವರೆಗೆ ಟ್ಯೂಷನ್‌ ಪಡೆದ ಯುವಕರಿಬ್ಬರು, ಕೋಚಿಂಗ್‌ ಸೆಂಟರ್‌ಗೆ ಬಂದು ಸಿಂಗ್‌ ಅವರನ್ನು ಹೊರಕರೆದು ಕುಶಲೋಪರಿ ವಿಚಾರಿಸುತ್ತಲೇ, ಅವರ ಮೇಲೆ ಗುಂಡುಹಾರಿಸಿ ಪರಾರಿಯಾಗಿದ್ದಾರೆ. ಸಿಂಗ್‌ ಅವರನ್ನು ಶೀಘ್ರವೇ ಆಸ್ಪತ್ರೆಗೆ ದಾಖಲಿಸಿದ ಕಾರಣ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹತ್ಯೆಗೆ ಯತ್ನಿಸಿದ ಇಬ್ಬರೂ ಹುಡುಗರು ಟ್ಯೂಷನ್‌ ಶುಲ್ಕ ಕೊಡಬೇಕಿತ್ತು.

ಅದನ್ನು ಒಂದೆರಡು ಸಮಾರಂಭಗಳಲ್ಲಿ ಅವರು ಎದುರಾದಾಗ ಸಿಂಗ್‌ ಕೇಳಿದ್ದರು. ಅದೇ ಕಾರಣಕ್ಕೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next