Advertisement

ಒಡೆಯನಪುರ ಗ್ರಾಮದಲ್ಲಿ ಗೌರಿ-ಗಣೇಶ ವಿಸರ್ಜನೆ

11:46 PM Sep 11, 2019 | Sriram |

ಶನಿವಾರಸಂತೆ: ಸಮಿಪದ ಒಡೆಯನಪುರ ಗ್ರಾಮದ ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಗ್ರಾಮದ ಸಮೂದಾಯ ಭವನ ದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿದ ಗೌರಿ- ಗಣೇಶಮೂರ್ತಿಗಳ ವಿಸಜನೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

Advertisement

ಗೌರಿ-ಗಣೇಶಮೂರ್ತಿ ವಿಸರ್ಜನಾ ಕಾರ್ಯಕ್ರಮದ ಪ್ರಯುಕ್ತ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.ವಿವಿಧ ಹೂವುಗಳಿಂದ ಅಲಂಕರಿಸಿದ ವಾಹನದಲ್ಲಿ ಗೌರಿ-ಗಣೇಶ ಮೂರ್ತಿಯನ್ನು ಕೂರಿಸಿ ಮಂಗಳ ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಯುವಕ, ಯುವತಿಯರು, ಮಕ್ಕಳು, ವಿವಿಧ ಜಾತಿ-ಜನಾಂಗದ ಬಾಂಧವರು ಬೇದಭಾವ ಮರೆತು ಒಂದಾಗಿ ಬೆರೆತು ಸಂಭ್ರಮದಿಂದ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

ಅ‌ನಂತರ ಗೌರಿ-ಗಣೇಶ ಮೂರ್ತಿ ಗಳನ್ನು ಶನಿವಾರಸಂತೆ ಹೊಳೆಯಲ್ಲಿ ವಿಸರ್ಜನೆ ಮಾಡಲಾಯಿತು.

ಗ್ರಾಮದ ಪ್ರಮುಖರಾದ ವಿ.ಆರ್‌.ಸುರೇಶ್‌ ಮೊಗೇರ, ಶ್ರೀಜಿತ್‌, ಪ್ರಕಾಶ್‌, ಪ್ರವೀಣ್‌, ಯತೀಶ್‌, ಪವನ್‌, ರಾಜು, ಉಮೇಶ್‌, ಮಂಜುನಾಥ್‌, ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next