Advertisement

6 ಸಾವಿರ ಮಂದಿ 2013ರಲ್ಲಿ ಪಡೆದಿದ್ದ ಸಾಲ ಇನ್ನೂ ಕಟ್ಟಿಲ್ಲ

12:38 PM Aug 25, 2019 | Team Udayavani |

ಕೋಲಾರ: ಜಿಲ್ಲೆಯಲ್ಲಿ 2013 ಮೇ 13ರಿಂದ ಇಲ್ಲಿಯವರೆಗೆ 6 ಸಾವಿರ ಫಲಾನುಭವಿಗಳಿಗೆ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯ ನೀಡಲಾಗಿದೆ. ಇದನ್ನು ಕೂಡಲೇ ಪಾವತಿ ಮಾಡಬೇಕೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಗಣೇಶ್‌ ಮನವಿ ಮಾಡಿದರು.

Advertisement

ಮುಳಬಾಗಿಲು ಮತ್ತು ಕೋಲಾರ ತಾಲೂಕಿನಲ್ಲಿ ನಿಗಮದಿಂದ ಆಯೋಜಿಸಿದ್ದ ಸಾಲ ಪಾವತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ನಿಯಮಾನುಸಾರ ಕನಿಷ್ಠ ಶೇ.15 ಸಾಲ ಸಂಗ್ರಹಣೆ ಕಡ್ಡಾಯವಾಗಿದೆ. ಆದರೆ, ಜಿಲ್ಲೆಯಲ್ಲಿ ಕೇವಲ ಶೇ.8 ಆಗಿದೆ. ಹಾಗಾಗಿ ಜಿಲ್ಲಾದ್ಯಂತ ಸಾಲ ಪಾವತಿ ಆಂದೋಲನ ನಿರಂತರವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ನಿಗಮದಿಂದ ಕೃಷಿ ಸಾಲ ನೀಡಿಲ್ಲ. ಆದ್ದರಿಂದ ಮನ್ನಾ ಆಗುವ ಪ್ರಶ್ನೆಯೇ ಇರುವುದಿಲ್ಲ. ಹಾಗಾಗಿ ಫಲಾನುಭವಿಗಳು ಸಾಲ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next