Advertisement

ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದ ಮೂವರ ದುರ್ಮರಣ

11:10 PM Feb 03, 2020 | Lakshmi GovindaRaj |

ಕೂಡ್ಲಿಗಿ: ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ್ದು, ಕಾರಿನಲ್ಲಿದ್ದ 2 ವರ್ಷದ ಹೆಣ್ಣು ಮಗು ಪ್ರಾಣಾಪಾಯದಿಂದ ಪಾರಾಗಿದೆ.

Advertisement

ಇಳಕಲ್‌ನ ವಸಂತ ಕುಮಾರ್‌ (37), ಪತ್ನಿ ವಿನುತಾ (32) ಹಾಗೂ ಕಾರು ಚಾಲಕ ಲೋಹಿತ್‌ (38) ಮೃತರು. ಕಾರಿನಲ್ಲಿದ್ದ ಇನ್ನೊಬ್ಬ ಚಾಲಕ ಹಾಗೂ ಮಾಲೀಕ ಪ್ರವೀಣ್‌ ಗಾಯಗೊಂಡು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದು, ದಂಪತಿಯ 2 ವರ್ಷದ ಮಗಳು ಋತ್ವಿಕಾ ಬಚಾವ್‌ ಆಗಿದ್ದಾಳೆ. ಇಳಕಲ್‌ ಮೂಲದ ವಸಂತ್‌ ಕುಮಾರ್‌ ಮಡಿಕೇರಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ತಂದೆ ಕುಬೇರಪ್ಪ ನವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಮಡಿಕೇರಿಯಿಂದ ಬಾಡಿಗೆ ಕಾರಿನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದಾಗ ರಸ್ತೆಯ ಎಡ ಭಾಗದಿಂದ ಬಲಭಾಗಕ್ಕೆ ನುಗ್ಗಿದ ಲಾರಿ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಹೆದ್ದಾರಿಯಲ್ಲಿ ಡಿಕ್ಕಿ ರಭಸಕ್ಕೆ ಕಾರು ಜಖಂಗೊಂಡಿದ್ದು, ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next