Advertisement

ನೀರಿನ ತೊಟ್ಟಿಗೆ ಬಿದ್ದು ಮಗು ಸಾವು

11:56 AM Jul 06, 2018 | |

ಪಿರಿಯಾಪಟ್ಟಣ: ನೀರಿನ ತೊಟ್ಟಿಗೆ ಬಿದ್ದು 2 ವರ್ಷದ ಮಗು ಮೃತಪಟ್ಟಿರುವ ಘಟನೆ ತಾಲೂಕಿನ ಬೆಟ್ಟದತುಂಗದ ಕೆಳಗಿನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. 

Advertisement

ಗ್ರಾಮದ ಜಗದೀಶ್‌-ಲಕ್ಷ್ಮೀ ದಂಪತಿಯ 2 ವರ್ಷದ ಯಶಸ್‌ ಮೃತಪಟ್ಟ ಮಗು. ಮಗುವಿನ ಪೋಷಕರು ಮನೆಯ ಹಿಂಭಾಗದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು ಮಗು ಅವರ ಬಳಿಯೇ ಆಟವಾಡುತ್ತಿತ್ತು.

ತಾಯಿ ಮನೆಯೋಳಗೆ ಕಾಫಿ ಮಾಡಲು ತೆರಳಿದಾಗ ಮಗು ಹಿಂದೆಯೇ ಓಡಿ ಬಂದು ಮನೆ ಸಮೀಪವಿರುವ ನೀರಿನ ತೊಟ್ಟಿ ಬಳಿಗೆ ಬಂದಿದೆ. ತೊಟ್ಟಿಯಲ್ಲಿ ಆಟಿಕೆಯನ್ನು ಕಂಡು, ಅದನ್ನು ಎತ್ತಲು ಹೋಗಿ 3 ಅಡಿ ಆಳವಿರುವ ತೊಟ್ಟಿಗೆ ಬಿದ್ದು ಮೃತಪಟ್ಟಿದೆ. 

Advertisement

Udayavani is now on Telegram. Click here to join our channel and stay updated with the latest news.

Next