Advertisement

ದಸರಾ ಆನೆ ದ್ರೋಣ ಸಾವು

06:41 AM Apr 27, 2019 | Lakshmi GovindaRaju |

ಹುಣಸೂರು/ಗೋಣಿಕೊಪ್ಪಲು: ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆಯ ಆಕರ್ಷಣೆಯಾಗಿದ್ದ ಆನೆ ದ್ರೋಣ, ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ದ್ರೋಣನಿಗೆ 37 ವರ್ಷ ವಯಸ್ಸಾಗಿತ್ತು.

Advertisement

ತಿತಿಮತಿ, ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದಲ್ಲಿ ಆರು ವರ್ಷಗಳಿಂದ ವಾಸವಾಗಿದ್ದ ದ್ರೋಣ, 2017 ಮತ್ತು 2018ರಲ್ಲಿ ಎರಡು ಬಾರಿ ದಸರಾದಲ್ಲಿ ಭಾಗವಹಿಸಿದ್ದ. ಶುಕ್ರವಾರ ಬೆಳಗ್ಗೆ ಶಿಬಿರದ ನೀರಿನ ತೊಟ್ಟಿಯಲ್ಲಿ ದಾಹ ನೀಗಿಸಿಕೊಂಡ ನಂತರ ಅಸ್ವಸ್ಥಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ಆನೆಯ ಶವಪರೀಕ್ಷೆ ಶನಿವಾರ ಬೆಳಗ್ಗೆ ನಡೆಯಲಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ವೈದ್ಯರಾದ ಡಾ| ನಾಗರಾಜ್‌ ತಿಳಿಸಿದ್ದಾರೆ. 2014ರಲ್ಲಿ ನಾಗರಹೊಳೆ ಅಭಯಾರಣ್ಯದ ಹಾಸನ ಜಿಲ್ಲೆಯ ಆಲೂರು ವ್ಯಾಪ್ತಿಯಲ್ಲಿ ಪುಂಡಾಟ ನಡೆಸಿದ್ದ ದ್ರೋಣನನ್ನು ಸೆರೆ ಹಿಡಿದು ಮತ್ತಿಗೋಡು ಆನೆ ಶಿಬಿರಕ್ಕೆ ಕರೆತರಲಾಗಿತ್ತು.

ನಂತರ ಸಂಯಮದ ತರಬೇತಿ ನೀಡಿ ಪಳಗಿಸಲಾಗಿತ್ತು. ದ್ರೋಣನನ್ನು ರವಿ ಮತ್ತು ಗುಂಡು ಎಂಬ ಮಾವುತ, ಕಾವಾಡಿಗಳು ಆರೈಕೆ ಮಾಡುತ್ತಿದ್ದರು. ನಂತರ ದ್ರೋಣ ಶಿಬಿರದ ಖಾಯಂ ನಿವಾಸಿಯಾಗಿದ್ದ. ಕಳೆದ ಬಾರಿ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಗಮನ ಸೆಳೆದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next