Advertisement

ಹೋರಿ ತಿವಿದು ಯುವಕ ಸಾವು

10:33 PM Nov 06, 2019 | Lakshmi GovindaRaju |

ಶಿರಾಳಕೊಪ್ಪ: ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ಯುವಕನೊಬ್ಬ ಹೋರಿ ತಿವಿದು ಮೃತಪಟ್ಟ ಘಟನೆ ತಡಸವಳ್ಳಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ನಾಗರಾಜ್‌ (27) ಮೃತಪಟ್ಟವರು. ತಡಸವಳ್ಳಿಯಲ್ಲಿ ನಡೆದ ಸ್ಪರ್ಧೆ ವೇಳೆ ಹೋರಿಗಳು ಓಡುತ್ತಿರುವುದನ್ನು ನೋಡುತ್ತ ನಿಂತಿದ್ದ ಇವರಿಗೆ ಬೆದರಿ ಬಂದ ಹೋರಿಯೊಂದು ಏಕಾಏಕಿ ತಿವಿಯಿತು.

Advertisement

ಇದರಿಂದ ತೀವ್ರ ಗಾಯಗೊಂಡ ಅವರನ್ನು ತಕ್ಷಣ ಶಿರಾಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿ ದ್ದಾರೆ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next