Advertisement

ಮರದ ದಿಮ್ಮಿ ಬಿದ್ದು ಯುವಕ ಸಾವು

08:51 AM Feb 09, 2019 | Team Udayavani |

ಕೊಪ್ಪ: ಟ್ರ್ಯಾಕ್ಟರ್‌ಗೆ ಮರದ ದಿಮ್ಮಿಗಳನ್ನು ತುಂಬಿಸುತ್ತಿದ್ದಾಗ ದಿಮ್ಮಿಯೊಂದು ಯುವಕನ ತಲೆಯ ಮೇಲೆ ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ತಾಲೂಕಿನ ನಿಲುವಾಗಿಲು ಸಮೀಪದ ಕಲ್ಮಕ್ಕಿಯಲ್ಲಿ ನಡೆದಿದೆ.

Advertisement

ಜೋಗಿಸರದ ಕರೀಂಸಾಬ್‌ ಎಂಬವರ ಮಗ ನಾಸೀರ್‌(30) ಮೃತ ಯುವಕ. ತಂದೆ ತಾಯಿ ಜೊತೆ ವಾಸವಾಗಿದ್ದ, ಈತನಿಗೆ ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರಿ ಇದ್ದಾರೆ.

ಆಟೋ ಚಾಲಕನಾಗಿದ್ದ ನಾಸೀರ್‌ ಬಿಡುವಿದ್ದಾಗ ಟಿಂಬರ್‌ ಲೋಡ್‌ಗೆ ಹೋಗುತ್ತಿದ್ದ. ಈ ಹಿಂದೆಯೂ ಟಿಂಬರ್‌ ಕೆಲಸ ಮಾಡುತ್ತಿದ್ದ ಈತ ಮಧ್ಯದಲ್ಲಿ ವಿದೇಶಕ್ಕೆ ಹೋಗಿದ್ದ. ಒಂದು ವರ್ಷದ ಹಿಂದೆ ಮತ್ತೆ ವಾಪಾಸು ಕೊಪ್ಪಕ್ಕೆ ಬಂದು ಆಟೋ ಓಡಿಸುತ್ತಿದ್ದ. ಗುರುವಾರ ಬೆಳಿಗ್ಗೆ ಕೊಪ್ಪ ಆಟೋ ನಿಲ್ದಾಣದ ಬಳಿ ತನ್ನ ಅಟೋ ನಿಲ್ಲಿಸಿ ಟಿಂಬರ್‌ ಕೆಲಸಕ್ಕೆ ಹೋಗಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ರ್ಯಾಕ್ಟರ್‌ ಮಾಲೀಕ ಕೇಶವಮೂರ್ತಿ ಮತ್ತು ಟಿಂಬರ್‌ ಗುತ್ತಿಗೆದಾರ ಫೈಜಲ್‌ ಎನ್ನುವವರ ವಿರುದ್ಧ ಹರಿಹರಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next