Advertisement

ಕೆರೆಯಲ್ಲಿ ಮುಳುಗಿ ಯುವಕ ಸಾವು

11:30 AM May 28, 2018 | Team Udayavani |

ರಾಮನಗರ: ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಈಜಾ 
ಡುವ ವೇಳೆ ನೀರಿನಲ್ಲಿ ಮುಳುಗಿ ಅಸುನೀಗಿದ ಘಟನೆ ನಡೆದಿದೆ.

Advertisement

ಬೆಂಗಳೂರಿನ ವೈಟ್‌ಫೀಲ್ಡ್‌ ಬಳಿಯ ಬೋಜನಹೊಸಳ್ಳಿ ನಿವಾಸಿ ಚಿನ್ನಯ್ಯ ಅವರ ಪುತ್ರ ಚೇತನ್‌ (24) ಮೃತಪಟ್ಟ ಯುವಕ. ಈತ ಇತ್ತೀಚೆಗಷ್ಟೆ ಎಂಜಿನ್ಯಿರಿಂಗ್‌ ಪದವಿ ಮುಗಿಸಿದ್ದ ಎನ್ನಲಾಗಿದೆ. ತಾಲೂಕಿನ ಎಸ್‌.ಆರ್‌. ಎಸ್‌ ಬೆಟ್ಟಕ್ಕೆ ಪ್ರವಾಸಕ್ಕೆಂದು ಸ್ನೇಹಿತರೊಡ ಗೂಡಿ ಬಂದಿದ್ದ ವೇಳೆ ಈ ಅನಾಹುತ ನಡೆದಿದೆ. ಶನಿವಾರ ಬೆಂಗಳೂರಿನಿಂದ 8 ಯುವಕರ ತಂಡ ವೊಂದು ಪ್ರವಾಸಕ್ಕೆಂದು ಅವ್ವೆರ ಹಳ್ಳಿಯ ಎಸ್‌ ಆರ್‌ಎಸ್‌ ಬೆಟ್ಟಕ್ಕೆ ಬಂದಿತ್ತು. ಬೆಟ್ಟದ ಪಕ್ಕದಲ್ಲಿರುವ ಹೊಸಕೆರೆಯಲ್ಲಿ ಸಂಜೆ 5 ಗಂಟೆಯ ಸಮಯದಲ್ಲಿ ಚೇತನ್‌ ಈಜಾಡಲು ಹೋಗಿದ್ದ. ಕೆಲವು ದಿನಗಳಿಂದ ಆಗುತ್ತಿ ರುವ ಮಳೆಯಿಂದಾಗಿ ಕೆರೆಯಲ್ಲಿ ನೀರು ತುಂಬಿತ್ತು. ಆಳತಿಳಿಯದ ಆತ ಈಜಾಡುವ ವೇಳೆ ಮುಳುಗಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ. 

ಮಾಹಿತಿ ಲಭ್ಯವಾದ ಕೂಡಲೇ ರಾಮ ನಗರ ಗ್ರಾಮಾಂತರ ಪೊಲೀಸ್‌ ಠಾಣೆಯ ಸಬ್‌ಇನ್ಸ್‌ ಪೆಕ್ಟರ್‌ ದೀಪಕ್‌ ನೇತೃತ್ವದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next