Advertisement

ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸಾವು

03:22 PM Jun 06, 2019 | Team Udayavani |

ಗೌರಬಿದನೂರು: ನೀರು ಕುಡಿಯಲು ಕೃಷಿ ಹೊಂಡದೊಳಕ್ಕೆ ಹೋಗಿದ್ದ ಮೇಕೆಯನ್ನು ಕರೆತರಲು ಹೋದ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ಜಾರಿ ಹೊಂಡದೊಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಗೌರಿಬಿದನೂರು ತಾಲೂಕು ಇಡಗೂರು ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಇಡಗೂರು ಗ್ರಾಮದ ರಮೇಶ್‌ ಎಂಬುವವರ ಮಗ ಅಶ್ವತ್ಥನಾರಾಯಣ(15) ಎಂದು ಗುರುತಿಸಲಾಗಿದೆ. ಇಡಗೂರು ಭೀಮೇಶ್ವರ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಅಶ್ವತ್ಥನಾರಾಯಣ ಬುಧವಾರ ಶಾಲೆಗೆ ರಜೆ ಇದ್ದುದ‌ರಿಂದ ತನ್ನ ಮನೆಯಲ್ಲಿ ಮೇಕೆಗಳನ್ನು ಮೇಯಿಸಲು ಹೋಗಿದ್ದಾನೆ. ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ನೀರು ಕುಡಿಯಲು ಹೋದ ಮೇಕೆಯನ್ನು ವಾಪಸ್‌ ಕರೆತರಲು ಹೋದಾಗ ದುರ್ಘ‌ಟನೆ ಸಂಭವಿಸಿದೆ. ಸ್ಥಳೀಯರು ಪೋಲೀಸರಿಗೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ತಿಳಿಸಿದ ನಂತರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next