Advertisement

ಕಾಡಾನೆ ತುಳಿದು ವ್ಯಕ್ತಿ ಸಾವು 

06:20 AM Feb 25, 2018 | Team Udayavani |

ಕೆಜಿಎಫ್: ಕಾಡಾನೆಗಳ ತುಳಿತದಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೆಜಿಎಫ್ ಕ್ಷೇತ್ರದ ಕ್ಯಾಸಂಬಳ್ಳಿ ಕಾಡಿನಲ್ಲಿ ಶನಿವಾರ ನಡೆದಿದೆ.

Advertisement

ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯಲ್ಲಿರುವ ಬೆಲ್‌ಕೋಗಿಲ್‌ ಗ್ರಾಮದ ಬಳಿ ಘಟನೆ ನಡೆದಿದ್ದು, ಕಾಡಾನೆ ತುಳಿತಕ್ಕೆ ಬಲಿಯಾದ ವ್ಯಕ್ತಿಯನ್ನು ಕರುಬೂರು ಗ್ರಾಮದ ಕೃಷ್ಣಪ್ಪ(60)ಎಂದು ಗುರುತಿಸಲಾಗಿದೆ.

ಮೂರು ಆನೆಗಳ ಹಿಂಡನ್ನು ಕೆಣಕಲು ಹೋದ ಕೃಷ್ಣಪ್ಪನನ್ನು ಕೋಪಗೊಂಡ ಆನೆಗಳು ತುಳಿದು ಸಾಯಿಸಿವೆ ಎನ್ನಲಾಗಿದೆ. ಆ್ಯಂಡರಸನ್‌ಪೇಟೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next