Advertisement

ಇಂಜೆಕ್ಷನ್ ನೀಡಿದ ಮರುದಿನವೇ ಲಕ್ಷಾಂತರ ರೂ. ಮೌಲ್ಯದ ಎತ್ತುಗಳು ಸಾವು

04:43 PM Dec 23, 2022 | Team Udayavani |

ಚಿಕ್ಕಮಗಳೂರು : ವೈದ್ಯರು ಇಂಜೆಕ್ಷನ್ ನೀಡಿದ ಮರುದಿನವೇ ಲಕ್ಷಾಂತರ ರೂ. ಮೌಲ್ಯದ ಎತ್ತುಗಳು ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ.

Advertisement

ಉಡೇವಾ ಗ್ರಾಮದ ಶಂಕರ್ ಎಂಬುವರಿಗೆ ಸೇರಿದ ಎತ್ತುಗಳು ಸಾವನ್ನಪ್ಪಿದ್ದು, ಇಂಜೆಕ್ಷನ್ ನೀಡಿದ ಪಶುವೈದ್ಯರ ವಿರುದ್ಧ ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.

ಪಶು ಆಸ್ಪತ್ರೆ ಮುಂದೆ ಎತ್ತುಗಳ ಕಳೇಬರಗಳನ್ನಿಟ್ಟು ಪ್ರತಿಭಟನೆ ನಡೆಸಲಾಗಿದ್ದು, ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಲಾಗಿದೆ.

ಆರೋಗ್ಯ ಸರಿ ಇಲ್ಲವೆಂದು ಎತ್ತುಗಳನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಗಂಟಲು ಬೇನೆ ಎಂದು ವೈದ್ಯ ಇಂಜೆಕ್ಷನ್ ನೀಡಿದ್ದರು.ಇಂಜೆಕ್ಷನ್ ನೀಡಿದ ಮರುದಿನವೇ ರಾಸುಗಳು ಸಾವನ್ನಪ್ಪಿದ್ದವೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next