Advertisement

ಉಳ್ಳಾಲ: ಬಂಧಿಸಲು ಹೋದ ಎಸ್ಐಗೆ ಚೂರಿ ಇರಿದು ಪರಾರಿ; ಆರೋಪಿಯ ಸಹೋದರ ವಶಕ್ಕೆ

10:39 AM Mar 24, 2022 | Team Udayavani |

ಉಳ್ಳಾಲ: ಕಳ್ಳತನಕ್ಕೆ ಸಂಬಂಧಿಸಿದ ಆರೋಪಿಯನ್ಬು ಬಂಧಿಸಲು ತೆರಳಿದ್ದ ವೇಳೆ ಎಸ್‍ಐಗೆ ಚೂರಿ ಇರಿದು ಪರಾರಿಯಾದ ಘಟನೆ ಉಳ್ಳಾಲದ ಕೋಣಾಜೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

Advertisement

ಕೊಣಾಜೆ ಠಾಣಾ ಎಸ್.ಐ ಶರಣಪ್ಪ ಅವರಿಗೆ ಆರೋಪಿ ಚೂರಿ ಇರಿದು ಪರಾರಿಯಾಗಿದ್ದಾನೆ.

ಪೊಲೀಸರು ಆರೋಪಿಯ ಸಹೋದರನನ್ನು ವಶಕ್ಕೆ ಪಡೆದಿದ್ದು, ಆರೋಪಿ ಈ ಹಿಂದೆ ಬಂದರು ಠಾಣಾ ಪೊಲೀಸರಿಗೂ ಇದೇ ರೀತಿ ಚೂರಿಯಿಂದ ಇರಿದು ಪರಾರಿಯಾಗಿದ್ದ ಎನ್ನಲಾಗಿದೆ.

ಕಳವು ಆರೋಪಿ ಸಾದಿಕ್ ಪಜೀರು ಪ್ರದೇಶಲ್ಲಿದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶರಣಪ್ಪ ಭಂಡಾರಿ ಸಿಬಂದಿಗಳೊಂದಿಗೆ ದಾಳಿ ನಡೆಸಿದಾಗ ಆರೋಪಿ ಸಾದಿಕ್, ಶರಣಪ್ಪ ಅವರ ಕೈಗೆ ಚೂರಿ ಇರಿದು ಪರಾರಿಯಾಗಿದ್ದಾನೆ.

ಇದನ್ನೂ ಓದಿ:ಮಲ್ಲಾರು: ಗುಜರಿ‌ ಅಂಗಡಿ ಸ್ಪೋಟ ಪ್ರಕರಣ; ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

Advertisement

ಆತನೊಂದಿಗಿದ್ದ ಸಹೋದರ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ನಾಸಿರ್ ನನ್ನು ಪೊಲೀಸರು ವಶಕ್ಜೆ ಪಡೆದಿದ್ದಾರೆ. ಆರೋಪಿ ಸಾದಿಕ್ ಈ ಹಿಂದೆ ಬಂದರು ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯ ಸಂದರ್ಭ ಹಿಡಿಯಲು ಹೋದಾಗ ಪೊಲೀಸ್ ಸಿಬ್ಬಂದಿ ವಿನೋದ್ ಮತ್ತು ಪ್ರವೀಣ್ ಎಂಬವರಿಗೆ ಚೂರಿಯಿಂದ ಇರಿದಿದ್ದ ಆರೋಪಿಯಾಗಿದ್ದ.

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುರುವಾರ ಪಜೀರು ಸಮೀಪ ಹಿಡಿಯಲು ಹೋದಾಗ ಆರೋಪಿ  ಎರಡನೇ ಬಾರಿಗೆ ಪೊಲೀಸರ  ಮೇಲೆ ಹಲ್ಲೆ ನಡೆಸಿದ್ದಾನೆ. ಕೊಣಾಜೆ ಠಾಣಾ ಪೊಲೀಸರು ಆರೋಪಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next