Advertisement

ಕಂಟೈನರ್‌-ಸ್ಕೂಟರ್‌ ಢಿಕ್ಕಿ: ಸವಾರನನ್ನು ಆಸ್ಪತ್ರೆಯಲ್ಲಿ ಬಿಟ್ಟು ಕಂಟೈನರ್‌ ಚಾಲಕ ಪರಾರಿ

07:55 PM May 19, 2023 | Team Udayavani |

ಬಂಟ್ವಾಳ9: ರಾ.ಹೆ. 75ರ ಮೆಲ್ಕಾರಿನಲ್ಲಿ ಕಂಟೈನರ್‌ ಹಾಗೂ ಸ್ಕೂಟರ್‌ ಢಿಕ್ಕಿ ಪ್ರಕರಣದಲ್ಲಿ ಗಾಯಾಳು ಸ್ಕೂಟರ್‌ ಸವಾರನನ್ನು ಆಸ್ಪತ್ರೆಯಲ್ಲಿ ಬಿಟ್ಟು ಕಂಟೈನರ್‌ ಚಾಲಕ ವಾಹನ ಸಹಿತ ಪರಾರಿಯಾದ ಘಟನೆ ಮೇ 15ರಂದು ನಡೆದಿದೆ.

Advertisement

ಘಟನೆಯಲ್ಲಿ ಸ್ಕೂಟರ್‌ ಸವಾರ ಬೋಳಂಗಡಿ ನಿವಾಸಿ ದೇವರಾಜ ನಾಯಕ್‌ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಕಂಟೈನರ್‌ ಹಾಗೂ ಸ್ಕೂಟರ್‌ ಎರಡೂ ಕೂಡ ಮೆಲ್ಕಾರ್‌ ಕಡೆಯಿಂದ ಬಿ.ಸಿ. ರೋಡು ಕಡೆಗೆ ಸಾಗುತ್ತಿದ್ದು, ಸ್ಕೂಟರ್‌ ಹಿಂಬದಿಗೆ ಕಂಟೈನರ್‌ ಢಿಕ್ಕಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಸ್ಕೂಟರ್‌ ಸವಾರನನ್ನು ಕಂಟೈನರ್‌ ಚಾಲಕ ಅದೇ ವಾಹನದಲ್ಲಿ ಕರೆದುಕೊಂಡು ಬಂದು ಬಿ.ಸಿ. ರೋಡು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next