Advertisement
ಸಮೀಪದ ಬೆಳ್ಳಿಗಟ್ಟಿ ಗ್ರಾಮದಲ್ಲಿ ಬೆಲ್ಲದ ಶಿಕ್ಷಣ ಮತ್ತು ಕೃಷಿ ಅಭಿವೃದ್ಧಿ ಪ್ರತಿಷ್ಠಾನ ರವಿವಾರ ಹಮ್ಮಿಕೊಂಡಿದ್ದ ಹಳ್ಳಿಗಾಡಿನ ಸರಕಾರಿ ಶಾಲಾ ಮಕ್ಕಳ ವಿಕಾಸ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಜ್ಜಿ, ಅಪ್ಪ, ಅಮ್ಮ, ದೊಡ್ಡಮ್ಮ ಸೇರಿ ಎಲ್ಲರೂ ನೀಡಿದ ಮುಕ್ತವಾದ ಪ್ರೀತಿಯ ಮಾರ್ಗದರ್ಶನ ನನ್ನೊಳಗೆ ಒಂದು ವಿಶಿಷ್ಟ ಆಸಕ್ತಿಯ ಬರವಣಿಗೆಯನ್ನು ರೂಢಿಸಿತು.
Related Articles
Advertisement
ಮಕ್ಕಳ ಸಾಹಿತಿ ಡಾ| ಆನಂದ ಪಾಟೀಲ ಮಾತನಾಡಿ, ಮಕ್ಕಳ ದಿನ ನಿತ್ಯದ ಶಾಲೆ ಕಲಿಕೆಯಾಚೆ ಇನ್ನಷ್ಟು ಅರಿವನ್ನು ವಿಸ್ತರಿಸಿಕೊಳ್ಳಲು ಈ ಬಗೆಯ ಚಟುವಟಿಕೆಯನ್ನ ಹಮ್ಮಿಕೊಳ್ಳುತ್ತಿದ್ದು, ಬೇರೆ-ಬೇರೆ ರಂಗದಲ್ಲಿನ ಪರಿಣತರು ಮಕ್ಕಳೊಡನೆ ಸಮಯ ಹಂಚಿಕೊಳ್ಳಲಿದ್ದಾರೆ.
ಇದೊಂದು ಗ್ರಾಮೀಣ ಮಕ್ಕಳಿಗೆ ಹೊಸ ಅನುಭವವಾಗಲಿದೆ. ಇದು ಕಲಿಕೆಯ ಪಾಠವಾಗದೆ, ಉಲ್ಲಾಸದ ಸಮಯವಾಗಲಿದ್ದು, ಮಕ್ಕಳಿಗೆ ಹಿರಿಯರೊಡನೆ ಹಲವಾರು ಬಗೆಯಲ್ಲಿ ಹಂಚಿಕೊಳ್ಳಲು, ಅವರಿಂದ ಸ್ಫೂಧಿರ್ತಿಗೊಳ್ಳಲು ಸಾಧ್ಯವಾಗಲಿದೆ. ಈಗಾಗಲೆ ವಿಶೇಷವಾದ ಸಾಧನೆ ಮಾಡಿದ ಮಕ್ಕಳೂ ಇಲ್ಲಿ ಸಮಯ ಹಂಚಿಕೊಳ್ಳಲಿದ್ದಾರೆ ಎಂದರು.