Advertisement

ಸ್ವತ್ಛ ಕಾರ್ಕಳ ಪರಿಕಲ್ಪನೆ ಅಣಕಿಸುವಂತಿದೆ ಕಸದ ರಾಶಿ!

11:38 PM Jun 04, 2019 | Team Udayavani |

ಕಾರ್ಕಳ: ಪುರಸಭಾ ವ್ಯಾಪ್ತಿಯ ಬೈಪಾಸ್‌ನಿಂದ ಜೋಡುರಸ್ತೆ ಸಂಪರ್ಕಿಸುವ ಮುಖ್ಯರಸ್ತೆಯ ರೋಟರಿ ಆಸ್ಪತ್ರೆ ಬಳಿ ಎಲ್ಲೆಂದರಲ್ಲಿ ಕಸ ಹರಿಡಿಕೊಂಡಿದ್ದು, ಸ್ವತ್ಛ ಕಾರ್ಕಳದ ಪರಿಕಲ್ಪನೆಯನ್ನು ಅಣಕಿಸುವಂತಿದೆ.

Advertisement

ಸಾರ್ವಜನಿಕರು ಕಸ, ತ್ಯಾಜ್ಯ ಸುರಿದು ಹೋಗುತ್ತಿರುವುದು ಮಾಮೂಲಿ ಯಾಗಿ ಕಂಡುಬರುತ್ತಿದ್ದು, ಇದರಿಂದ ಪಾದಚಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಎಲ್ಲಡೆ ಸ್ವತ್ಛತೆಯದ್ದೇ ಮಾತು, ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿರುವ ನಡುವೆಯೇ ನಗರದ ಮುಖ್ಯರಸ್ತೆಗೆ ಕಸ ತಂದು ಸುರಿಯುತ್ತಿರುವುದು ಪ್ರಜ್ಞಾವಂತ ನಾಗರಿಕರ ಮತ್ತು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿಂದೆ ಕಾರ್ಕಳ ಪುರಸಭೆಗೆ ರಾಯಪ್ಪ ಅವರು ಮುಖ್ಯಾಧಿಕಾರಿಯಾಗಿದ್ದ ವೇಳೆ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಡುತ್ತಿರಲಿಲ್ಲ. ಅಂತಹದಕ್ಕೆಲ್ಲ ಕಡಿವಾಣ ಹಾಕಿದ್ದರು. ಇದೀಗ ಪೇಟೆಯ ಕೆಲವೆಡೆ ಕಸ ಕಂಡುಬರುತ್ತಿದೆ ರಾಮ ಮೊಗೇರ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next