Advertisement

ಸಮ್ಮಿಶ್ರ ಸರ್ಕಾರ ಶೀಘ್ರವೇ ಪತನ

06:35 AM Jun 04, 2018 | Team Udayavani |

ಧಾರವಾಡ: ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ಮೈತ್ರಿಯ ಫಲವಾಗಿ ಮುಖ್ಯಮಂತ್ರಿ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಎಷ್ಟು ದಿನಗಳ ಕಾಲ ಸಿಎಂ ಆಗಿರುತ್ತಾರೆ ಎಂಬ ಬಗ್ಗೆ ನಾನು ಭವಿಷ್ಯ ಹೇಳಲಾರೆ. 

Advertisement

ಆದರೆ ಅತೀ ಶೀಘ್ರದಲ್ಲೇ ಈ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ಕಡೆ ದೊಡ್ಡ ಮೀನು ಸಣ್ಣ ಮೀನನ್ನು ನುಂಗಿದರೆ
ಕರ್ನಾಟಕದಲ್ಲಿ ಸಣ್ಣ ಮೀನೇ ದೊಡ್ಡ ಮೀನನ್ನು ನುಂಗುತ್ತಿದೆ. ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಮುಂದೆ ಮಂಡೆಯೂರಿದ
ಪರಿಣಾಮ, ಇವು ಕಾಂಗ್ರೆಸ್‌ನ ಕೊನೆಯದಿನಗಳು. ನಾವು ಹೇಳಿದ ಹಾಗೆ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಕೊನೆಯ ಮುಖ್ಯ ಮಂತ್ರಿ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಕಾಂಗ್ರೆಸ್‌ ಪಕ್ಷವು ಇಂದು 50 ಪಕ್ಷಗಳೊಂದಿಗೆ ದೋಸ್ತಿ ಮಾಡಿಕೊಳ್ಳುವ ದಯನೀಯ ಸ್ಥಿತಿ ತಲುಪಿದೆ. ಈ ಮೂಲಕ ಕಾಂಗ್ರೆಸ್‌ ಪಕ್ಷ ಅವನತಿ ಹಂತ ತಲುಪಿದೆ.

ರಾಹುಲ್‌ ಗಾಂಧಿ ಅವರಿಗೆ ಸ್ವಂತ ಬುದ್ಧಿ ಹಾಗೂ ಸ್ವಂತ ಶ್ರಮ ಇಲ್ಲದಿರುವುದರಿಂದ ಜೆಡಿಎಸ್‌ ಹಾಗೂ ತೃತೀಯ ರಂಗದ ಮುಂದೆ ಮಂಡೆಯೂರಿದ್ದಾರೆ. ನಾವು ಕಾಂಗ್ರೆಸ್‌ ಮುಕ್ತ ಭಾರತ ಆಗಬೇಕು ಎನ್ನುತ್ತೇವೆ. ಆದರೆ, ಆ ಕೆಲಸವನ್ನು ರಾಹುಲ್‌ ಗಾಂಧಿ ಅವರೇ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಏಕಾಂಗಿಯಾಗಿ ಮೋದಿ ಅವರನ್ನು ಎದುರಿಸಲಾಗದೇ ದುಷ್ಟಕೂಟ ರಚಿಸಿಕೊಂಡು ಬರುತ್ತಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next