Advertisement

ಸಮ್ಮಿಶ್ರ ಸರಕಾರ ಎಚ್‌ಡಿಡಿ ಮನೆತನದ್ದಾಗದಿರಲಿ

07:00 AM May 24, 2018 | Team Udayavani |

ಹುಬ್ಬಳ್ಳಿ: ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳನ್ನು ಕರೆಸಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ತಯಾರಿ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದಿದ್ದು, ಅವರು ಸಂವಿಧಾನಾತೀತ ವ್ಯಕ್ತಿಯಾಗಲು ಹೊರಟಿರುವುದರ ಮುನ್ಸೂಚನೆ ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. 

Advertisement

ಸುದ್ದಿಗಾರರ ಜೊತೆ ಮಾತನಾಡಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಪ್ರಧಾನಿ ಹುದ್ದೆ ಅಲಂಕರಿಸಿದ್ದವರು. ದೇಶದ ಇಂದಿನ ರಾಜಕೀಯ ಕ್ಷೇತ್ರದಲ್ಲಿ ಹಿರಿಯರು ಎನಿಸಿಕೊಂಡವರು.

ಆದರೆ, ಅವರ ಈ ನಡೆಯೇ ಸಂವಿಧಾನಾತೀತವಾಗಿದೆ ಎಂಬುದು ಅವರಿಗೇ ತಿಳಿಯದಿರುವುದು ದುರದೃಷ್ಟಕರ. ಸಮ್ಮಿಶ್ರ ಸರಕಾರ ಸಂವಿಧಾನ ಬದಟಛಿ ಸರಕಾರವಾಗಬೇಕೇ ಹೊರತು ದೇವೇಗೌಡರ ಮನೆತನದ ಸರಕಾರ ಆಗಬಾರದು ಎಂದು ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next