Advertisement
ಅಪನಗದೀಕರಣ ಮತ್ತು ಅದರ ನಂತರದ ಎಲ್ಲ ನೀತಿ- ನಿಯಮಗಳಿಂದ ಜನಸಾಮಾನ್ಯರೇ ಸಂಕಟ ಅನುಭವಿಸುತ್ತಿದ್ದಾರೆ. ಈ ನಡುವೆ ಎಸ್ಬಿಐನ “ಕನಿಷ್ಠ ಸರಾಸರಿ ಮೊತ್ತ’ ನೀತಿ ಗ್ರಾಹಕರ ಆಕ್ಷೇಪಕ್ಕೆ ಕಾರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, “ತಕ್ಷಣ ಇಂಥ ನಿರ್ಧಾರ ಬೇಡ. ಈ ಬಗ್ಗೆ ಮರು ಆಲೋಚಿಸಿ ಎಸ್ಬಿಐ ಹೆಜ್ಜೆ ಇಡಬೇಕು’ ಎಂದು ಸಲಹೆ ನೀಡಿದೆ. ಉಳಿತಾಯ ಖಾತೆಯಲ್ಲಿ 5000 ರೂ. ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ಗ್ರಾಮೀಣಕ್ಕೆ ಸೇವಾ ತೆರಿಗೆಯ ಜತೆಗೆ ಕನಿಷ್ಠ 20, ಮೆಟ್ರೋಸಿಟಿಯ ಗ್ರಾಹಕರಿಗೆ ಕನಿಷ್ಠ 100 ದಂಡ ಮೊತ್ತ ನಿಗದಿ ಪಡಿಸಲು ಎಸ್ಬಿಐ ಮುಂದಾಗಿತ್ತು.
Related Articles
ನಿಷೇಧಗೊಂಡ ನೋಟುಗಳನ್ನು ಠೇವಣಿ ಇಡಲು ಸರ್ಕಾರ ಭರವಸೆ ಕೊಟ್ಟಂತೆ ಅವಕಾಶ ಕೊಡುತ್ತಿಲ್ಲ ಎಂಬ ಮನವಿಯ ಹಿನ್ನಲೆಯಲ್ಲಿ ಇದಕ್ಕೆ ಸೂಕ್ತ ಉತ್ತರ ನೀಡಬೇಕೆಂದು ಕೇಂದ್ರ ಮತ್ತು ಆರ್ಬಿಐಗೆ ಸುಪ್ರೀಂ ನೋಟಿಸ್ ಜಾರಿ ಮಾಡಿದೆ.
Advertisement