Advertisement

ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ, ಕೊಲೀಜಿಯಂ ಬಿಡುತ್ತಿಲ್ಲ

03:45 AM Apr 22, 2017 | Team Udayavani |

ನವದೆಹಲಿ: ದೇಶದ ವಿವಿಧ ಹೈಕೋರ್ಟ್‌ಗಳಿಗೆ ಜಡ್ಜ್ ಗಳ ನೇಮಕ ಕುರಿತ ಕಡತವು ಒಮ್ಮೆ ಕೊಲೀಜಿಯಂನಿಂದ ಕೇಂದ್ರ ಸರ್ಕಾರಕ್ಕೆ, ಮತ್ತೂಮ್ಮೆ ಸರ್ಕಾರದಿಂದ ಕೊಲೀಜಿಯಂಗೆ… ಹೀಗೆ ಆ ಕಡೆ, ಈ ಕಡೆ ಸಂಚರಿಸುತ್ತಲೇ ಇದೆ. ಸರ್ಕಾರ ಒಪ್ಪುತ್ತಿಲ್ಲ, ಕೊಲೀಜಿಯಂ ಬಿಡುತ್ತಿಲ್ಲ. ಈಗ ಎರಡನೇ ಬಾರಿಗೆ ಸರ್ಕಾರ ಹಿಂದಿರುಗಿಸಿದ್ದ ಶಿಫಾರಸಿನ ಪಟ್ಟಿಯನ್ನು ಕೊಲೀಜಿಯಂ ಮತ್ತೆ ಕಳುಹಿಸಿಕೊಟ್ಟಿದೆ. ಈ ಬೆಳವಣಿಗೆಯಿಂದಾಗಿ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಹೊಸ ಸಂಘರ್ಷಕ್ಕೆ ನಾಂದಿ ಹಾಡುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

Advertisement

ಕೊಲೀಜಿಯಂ ಈಗಾಗಲೇ 37 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಆದರೆ, ಸರ್ಕಾರವು ನ್ಯಾಯಮೂರ್ತಿಗಳ ನೇಮಕ ಕುರಿತ ಮಾರ್ಗಸೂಚಿಯಲ್ಲಿ “ರಾಷ್ಟ್ರೀಯ ಭದ್ರತೆ’ ಕಲಂ ಸೇರಿಸಬೇಕು ಎಂದು ಕೋರಿಕೊಂಡಿದೆ. ಈ ಕಲಂ ಅನ್ನು ಸೇರಿಸಿದರೆ, ಕೊಲೀಜಿಯ ಕಳುಹಿಸಿದ ಪಟ್ಟಿಯಲ್ಲಿರುವ ಅಭ್ಯರ್ಥಿಯ ಹೆಸರನ್ನು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ನೆಪ ಹೇಳಿ ತಿರಸ್ಕರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿರುತ್ತದೆ. ಹಾಗಾಗಿ, ಅದಕ್ಕೆ ಕೊಲೀಜಿಯಂ ಒಪ್ಪುತ್ತಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next