Advertisement

ನಗರದ ಮೂರು ಕಡೆ ನಿರಾಶ್ರಿತರ ಕೇಂದ್ರ

06:42 AM Apr 27, 2019 | Team Udayavani |

ಬೆಂಗಳೂರು: ನಗರದ ರಸ್ತೆ ಬದಿಯಲ್ಲಿ ಜೀವನ ಸಾಗಿಸುತ್ತಿರುವ ನಿರಾಶ್ರಿತರಿಗೆ ಸೂರು ಕಲ್ಪಿಸಲು ಕೊನೆಗೂ ಬಿಬಿಎಂಪಿ ಮನಸು ಮಾಡಿದ್ದು, ನಗರದ ಮೂರು ಕಡೆ ನಿರಾಶ್ರಿತರ ಕೇಂದ್ರಗಳನ್ನು ಸ್ಥಾಪಿಸಲು ಟೆಂಡರ್‌ ಕರೆದಿದೆ.

Advertisement

ನಗರದಲ್ಲಿನ ನಿರಾಶ್ರಿತರ ಪತ್ತೆಗಾಗಿ ಮತ್ತು ಅವರಿಗೆ ಸೂಕ್ತ ಆಶ್ರಯ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನ 250 ಸ್ವಯಂ ಸೇವಾ ಸಂಸ್ಥೆಗಳು ಇಂಪ್ಯಾಕ್ಟ್ ಇಂಡಿಯಾ ತಂಡ ರಚಿಸಿಕೊಂಡು ನಿರಾಶ್ರಿತರ ಸಮೀಕ್ಷೆ ನಡೆಸಿದ್ದವು. ಅದರಂತೆ 10 ತಂಡಗಳು, 8 ವಲಯಗಳಲ್ಲಿ ಎರಡು ಹಂತಗಳಲ್ಲಿ ಸಮೀಕ್ಷೆ ನಡೆಸಿದ್ದವು.

ಪ್ರಮುಖವಾಗಿ ರಾತ್ರಿ ರಾತ್ರಿ 10 ರಿಂದ ಬೆಳಗ್ಗೆ 3 ಗಂಟೆವರೆಗೆ ಕೆ.ಆರ್‌.ಮಾರುಕಟ್ಟೆ, ರೈಲು ನಿಲ್ದಾಣ ಸೇರಿ ಪ್ರಮುಖ ಕಡೆಗಳಲ್ಲಿ ಸಮೀಕ್ಷೆ ನಡೆಸಿ ನಗರದಲ್ಲಿ 6 ಸಾವಿರ ನಿರಾಶ್ರಿತರು ಇರುವುದು ಕಂಡುಬಂದಿತ್ತು. ಆದರಂತೆ ನಿರಾಶ್ರಿತರಿಗಾಗಿ ನಗರದಲ್ಲಿ ಕನಿಷ್ಠ 10 ಕೇಂದ್ರಗಳನ್ನು ಸ್ಥಾಪಿಸುವುದಾಗಿ ಬಿಬಿಎಂಪಿ ಭರವಸೆ ನೀಡಿತ್ತಾದರೂ, ಅದನ್ನು ಅನುಷ್ಠಾನಗೊಳಿಸಲು ಮುಂದಾಗಿರಲಿಲ್ಲ.

“ಉದಯವಾಣಿ’ ಗಮನ ಸೆಳೆದಿತ್ತು: ನಗರದಲ್ಲಿರುವ ನಿರಾಶ್ರಿತರು ಅನುಭವಿಸುತ್ತಿರುವ ತೊಂದರೆಗಳು ಹಾಗೂ ಬಿಬಿಎಂಪಿ ಅವರಿಗೆ ಸೂರು ಕಲ್ಪಿಸುವಲ್ಲಿ ವಿಫ‌ಲವಾಗಿರುವ ಕುರಿತಂತೆ “ಉದಯವಾಣಿ’ ಪತ್ರಿಕೆಯು ಏಪ್ರಿಲ್‌ 21ರಂದು “ನಿರಾಶ್ರಿತರ ಕೇಂದ್ರಗಳಿಗೇ ಇಲ್ಲ ಆಶ್ರಯ’ ಶೀರ್ಷಿಕೆಯಡಿ ವಿವರವಾದ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಕ್ರಮಕ್ಕೆ ಮುಂದಾಗಿರುವ ಪಾಲಿಕೆಯು ನಗರದ ವಿವಿಧ ಕಡೆಗಳಲ್ಲಿ ನಿರಾಶ್ರಿತರ ಆಶ್ರಯ ತಾಣ ನಿರ್ಮಿಸಲು ಟೆಂಡರ್‌ ಆಹ್ವಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next