Advertisement

ಸಂಭ್ರಮದ ಹನುಮಾನ ದೇವರ ಓಕುಳಿ

02:27 PM Jul 08, 2019 | Suhan S |

ಜಮಖಂಡಿ: ನಗರದ ಹನುಮಾನ ದೇವರ ಓಕುಳಿ ರವಿವಾರ ಸ್ಥಳೀಯ ಹಿರಿಯರ ನೇತೃತ್ವದಲ್ಲಿ ಯುವಕರಿಂದ ಓಕಳಿ ಕಂಬ ಏರುವ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು.

Advertisement

ಅಂದಾಜು 50 ಅಡಿ ಎತ್ತರದ ಕಂಬವನ್ನು ಎರಲು ಹರಸಾಹಸ ಮಾಡುತ್ತಿದ್ದ ತಂಡಕ್ಕೆ ಮತ್ತೂಂದು ತಂಡದ ಯುವಕರು ನೀರು ಎರಚುವ ಮೂಲಕ ಕೆಳಗಡೆ ಇಳಿಸುವ ದೃಶ್ಯ ವಿಶೇಷವಾಗಿತ್ತು. ನೀರು ಎರಚುವ ತಂಡ ಲೆಕ್ಕಿಸದೇ ಕುಂಬಾರ ಗಲ್ಲಿ ಯುವಕರ ತಂಡ ಪರವಾಗಿ ಸೋಮಲಿಂಗ ಯುವಕ 50 ಅಡಿ ಕಂಬ ಏರುವ ಮೂಲಕ ವಿಜೇತರಾದರು. ನಂತರ ಹನುಮಾನ ದೇವಸ್ಥಾನ ಕಮೀಟಿ ಮತ್ತು ನಗರದ ಹಿರಿಯರು ವಿಜೇತ ತಂಡದ ಯುವಕನನ್ನು ಸನ್ಮಾನಿಸಿ ಮೆರವಣಿಗೆ ಮಾಡಿದರು.

ಐತಿಹಾಸಿಕ ಓಕಳಿ ಕಂಬ ಹತ್ತುವ ಸ್ಪರ್ಧೆಯನ್ನು ಜನತೆ ವೀಕ್ಷಿಸಿ ಸಂಭ್ರಮಿಸಿದರು. ನಂತರ ನೆರದಿದ್ದ ಜನರಿಗೆ ಬಣ್ಣದ ನೀರು ಎರಚುವ ಮೂಲಕ ಓಕುಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next