Advertisement

ಕೋವಿಡ್‌ 19ಗೆ ಮುಂಜಾಗ್ರತೆಯೇ ಮದ್ದು

06:00 AM Jun 15, 2020 | Lakshmi GovindaRaj |

ಪಿರಿಯಾಪಟ್ಟಣ: ಪಟ್ಟಣ ಹಾಗೂ ಗ್ರಾಮಾಂ ತರ ಪ್ರದೇಶಗಳ ಸಾರ್ವಜನಿಕರಿಗೆ ಕೋವಿಡ್‌ 19 ಸೋಂಕು ಹರಡದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮನೆ ಮನೆಗೆ ಮಾಹಿತಿ ಪತ್ರ ವಿತರಿಸಲಾಗುವುದು ಎಂದು ಶ್ರೀಕ್ಷೇತ್ರ ಧರ್ಮ  ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇ ಶಿಕ ನಿರ್ದೇಶಕ ವಸಂತ್‌ ಸಾಲಿಯಾನ ತಿಳಿಸಿದರು.

Advertisement

ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಕೋವಿಡ್‌ 19 ಸೋಂಕಿಗೆ ಇನ್ನೂ ಸೂಕ್ತ  ಚಿಕಿತ್ಸೆ ಹಾಗೂ ಮದ್ದು ಕಂಡು ಹಿಡಿಯದ ಕಾರಣ ಸಮುದಾಯ ಎಚ್ಚೆತ್ತುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯ ಮಾಸ್ಕ್ ಧರಿಸಿ ಸೋಂಕು ಹರಡದಂತೆ ಎಚ್ಚರ ವಹಿಸಬೇಕೆಂದರು.

ಸಿಪಿಐ ಪ್ರದೀಪ್‌ ಮಾತನಾಡಿ, ಲಾಕ್‌  ಡೌನ್‌ ಸಡಿಲಿಕೆ ಇದೆ ಎಂದು ಸಾರ್ವಜನಿಕರು ಅನಗತ್ಯ ಓಡಾಡದೇ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು. ಮೈಮುಲ್‌ ನಿರ್ದೇಶಕ ಪ್ರಸನ್ನ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವಿವಿಧ ಯೋಜನೆ ಹಮ್ಮಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಡಾ.ಯೋಗೇಶ್‌, ಯೋಜನಾಧಿಕಾರಿಗಳಾದ ಸುರೇಶ್‌ ಶೆಟ್ಟಿ, ಪ್ರಕಾಶ್‌ ನಾಯಕ್‌, ಜಯಂತಿ, ಸದಾಶಿವ, ಎಂಐಎಸ್‌  ಯೋಜನಾಧಿಕಾರಿ ಸುಕ್ರು ಗೌಡ, ಪುರಸಭೆ ಆರೋಗ್ಯಾಧಿಕಾರಿ ಆದರ್ಶ್‌, ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next