Advertisement

Udupi ಮನೆಯ ಎದುರು ನಿಲ್ಲಿಸಿದ್ದ ಕಾರು ನಾಪತ್ತೆ

12:52 AM Dec 13, 2023 | Team Udayavani |

ಉಡುಪಿ: ಮನೆಯ ಎದುರುಭಾಗದಲ್ಲಿ ನಿಲ್ಲಿಸಿದ್ದ ಕಾರು ಕಳವಾದ ಘಟನೆ ನಡೆದಿದೆ. ಅಂಬಲಪಾಡಿಯ ಕಾಳಿಕಾಂಬ ನಗರದಲ್ಲಿ ವಾಸವಿರುವ ಶಾರದಾ ಅವರು ತನ್ನ ಗಂಡನೊಂದಿಗೆ ಬೆಂಗಳೂರಿಗೆ ಹೋಗಿದ್ದರು. ಡಿ.10ರಂದು ಅವರ ಮನೆಯ ಬಾಡಿಗೆದಾರರು ಕರೆಮಾಡಿ ಮನೆಯ ಮುಖ್ಯ ದ್ವಾರದ ಡೋರ್‌ ಲಾಕ್‌ ಅನ್ನು ಯಾರೋ ಒಡೆದಿದು, ನಿಲ್ಲಿಸಿದ ಕಾರು ಕಳವುಗೈದಿರುವುದಾಗಿ ತಿಳಿಸಿದ್ದರು.

Advertisement

ಅದರಂತೆ ಶಾರದಾ ಅವರು ಡಿ.11ರಂದು ಮನೆಗೆ ಬಂದು ನೋಡಿದಾಗ ಮನೆಯ ಬೀಗ ಮುರಿದು ಕಾರಿನ ಕೀಯನ್ನು ತೆಗೆದು ಮನೆಯ ಹೊರಗೆ ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಕಾರು, ಆರ್‌ಸಿ, ಡಿಎಲ್‌, ಇನ್ಶೂರೆನ್ಸ್‌ಗಳನ್ನು ಕಳ್ಳರು ಕಳವುಮಾಡಿಕೊಂಡು ಹೋಗಿರುವುದು ತಿಳಿದುಬಂದಿದೆ.

ಡಿ.9ರ ರಾತ್ರಿಯಿಂದ ಡಿ.10ರ ನಡುವೆ ಈ ಕಳ್ಳತನ ನಡೆದಿರುವ ಸಾಧ್ಯತೆಗಳಿವೆ. ಕಳವಾದ ಕಾರಿನ ಅಂದಾಜು ಮೌಲ್ಯ 7 ಲ.ರೂ.ಆಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next