Advertisement

ಮೋಂಬತ್ತಿ ಬೆಳಗಿತು!ನಾಯಕಿ ಇಲ್ಲದ ನಾಯಕನ ಮುಖದಲ್ಲಿ ಮಾತ್ರ ಬೆಳಕಿಲ್ಲ

02:55 PM May 26, 2017 | |

ನಿರ್ದೇಶಕ ಶ್ರೀನಿವಾಸ್‌ ಕೌಶಿಕ್‌ “ಮೋಂಬತ್ತಿ’ ಎಂಬ ಸಿನಿಮಾ ಆರಂಭಿಸಿರುವ ವಿಷಯವನ್ನು ನೀವು ಕೇಳಿರಬಹುದು . ಈಗ ಆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಲಹರಿ ಸಂಸ್ಥೆಯ ಮೂಲಕ ಹಾಡುಗಳು ಹೊರಬಂದಿದ್ದು, ಇತ್ತೀಚೆಗೆ ಚಿತ್ರತಂಡ ಜೊತೆಯಾಗಿ ಆಡಿಯೋ ಬಿಡುಗಡೆ ಮಾಡಿದೆ.

Advertisement

ಈ ಚಿತ್ರದ ಮೂಲಕ ರವಿಕುಮಾರ್‌ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ. ಚಿತ್ರದಲ್ಲಿ ನೀತು, ಯತಿರಾಜ್‌ ಸೇರಿದಂತೆ ಅನೇಕರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಶ್ರೀನಿವಾಸ್‌ ಕೌಶಿಕ್‌ ಬಂದವರನ್ನು ಸ್ವಾಗತಿಸುವುದರಲ್ಲಿ, ಹಾಡು ತೋರಿಸುವುದರಲ್ಲ  ಬಿಝಿಯಾಗಿದ್ದರಿಂದ ಸಿನಿಮಾದ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಇದೊಂದು ಕ್ರೈಮ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆಯಾಗಿದ್ದು, ಇಂದಿನ ಟ್ರೆಂಡ್‌ಗೆ ಪೂರಕವಾಗಿ ಮೂಡಿ ಬಂದಿದೆಯಂತೆ. ಈ ಚಿತ್ರವನ್ನು ಪ್ರಭಾಕರ್‌ ನಿರ್ಮಿಸಿದ್ದು, ಅವರು ಕೂಡಾ ಮಾತನಾಡುವ ಗೋಜಿಗೆ ಹೋಗಲಿಲ್ಲ.

ನೀತು ಇಲ್ಲಿ ಎಸಿಪಿ ಶಿವಾನಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ನೀತುಗೆ ಆ್ಯಕ್ಷನ್‌ ಪಾತ್ರಗಳ ಅವಕಾಶ ಬಂದಿತ್ತಂತೆ. ಆದರೆ, ತಾನು ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯನಾ ಎಂಬ ಸಂದೇಹ ಸ್ವತಃ ನೀತುಗಿತ್ತಂತೆ. ಆದರೆ, ಈಗ ಶಿವಾನಿ ಮೂಲಕ ಆ್ಯಕ್ಷನ್‌ ಸಿನಿಮಾದತ್ತ ಹೊರಳಿದ್ದಾರೆ.”ಮೊದಲ ಬಾರಿಗೆ ಆ್ಯಕ್ಷನ್‌ ಸಿನಿಮಾ ಮಾಡಿದ್ದೇನೆ. ಇಲ್ಲಿ ಫೈಟ್‌ ಬೇರೆ ಇದೆ. ಜನ ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲವಂತೂ ಇದೆ’ ಎಂದರು ನೀತು.

ಚಿತ್ರದಲ್ಲಿ ಮೂವರು ನಾಯಕಿ ಯರಿ ದ್ದರೂ ಸಿನಿಮಾದಲ್ಲಿ ತನಗೆ ಯಾವ ನಾಯಕಿಯನ್ನೂ ಕೊಟ್ಟಿಲ್ಲ ಎಂದು ಪದೇ ಪದೇ ಬೇಸರ ಮಾಡಿ ಕೊಳ್ಳು ತ್ತಲೇ ಮಾತಿಗಿಳಿದ ನಾಯಕ ರವಿಕುಮಾರ್‌ ಇಲ್ಲಿ ಬಿಝಿನೆಸ್‌ ಮ್ಯಾನ್‌ ಆಗಿ ನಟಿಸಿದ್ದಾರಂತೆ. ಮೊದಲ ಸಿನಿಮಾ ವಾದ್ದರಿಂದನೀತು ಸೇರಿದಂತೆ ಇತರ ಕಲಾವಿದರು ತನಗೆ ಸಹಕಾರ ನೀಡಿದರು ಎನ್ನುವುದು ರವಿಕುಮಾರ್‌ ಮಾತು. ಚಿತ್ರದಲ್ಲಿ ಯತಿರಾಜ್‌ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೊಲೀಸ್‌ ಆμàಸರ್‌ ಆಗಿ ಕಾಣಿಸಿಕೊಂಡಿರುವ ಯತಿ, ಆರಂಭದಿಂದ ಕೊನೆವರೆಗೂ ನೀತು ಜೊತೆ ಕಾಣಿಸಿಕೊಂಡಿದ್ದಾರಂತೆ. ನೀತು ಸೀರಿಯಸ್‌ ಆμàಸರ್‌ ಆದರೆ, ಯತಿರಾಜ್‌ ಫ‌ನ್ನಿ ಆμàಸರ್‌ ಅಂತೆ. ಈ ಕಾಂಬಿನೇಶನ್‌ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ಯತಿ ಮಾತು.

ಚಿತ್ರದ ಹಾಡೊಂದರಲ್ಲಿ “ಬಿಗ್‌ಬಾಸ್‌’ ಸಂಜನಾ ಕಾಣಿಸಿಕೊಂಡಿದ್ದಾರೆ. ರ್ಯಾಪ್‌ ಸ್ಯಾಂಗ್‌ ಆದ್ದರಿಂದ ಖುಷಿಯಿಂದ ಒಪ್ಪಿಕೊಂಡೆ ಎನ್ನುವ ಸಂಜನಾಗೆ ಈ ಹಾಡು ಹಿಟ್‌ ಆಗುವ ವಿಶ್ವಾಸವಿದೆ.ಚಿತ್ರೆಕ್ಕೆ ಸತೀಶ್‌ಬಾಬು ಸಂಗೀತ ನೀಡಿದ್ದಾರೆ. ಲಹರಿ ವೇಲು ಚಿತ್ರತಂಡಕ್ಕೆ ಶುಭಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next