Advertisement

Aranthodu ವಿದ್ಯಾರ್ಥಿಯನ್ನು ಎಳೆದೊಯ್ದ ಬಸ್‌

09:47 PM Aug 22, 2023 | Team Udayavani |

ಅರಂತೋಡು: ಬಸ್ಸಿಗೆ ಓಡಿ ಹೋಗಿ ಹತ್ತುವ ಸಂದರ್ಭ ಆಯ ತಪ್ಪಿ ಬಿದ್ದ ಸುಳ್ಯದ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಯೋರ್ವನನ್ನು ಬಸ್‌ ಸುಮಾರು 50 ಮೀಟರ್‌ನಷ್ಟು ದೂರ ಎಳೆದೊಯ್ದ ಘಟನೆ ನಡೆದಿದೆ.

Advertisement

ಸುಳ್ಯದಿಂದ ಕೊಯ್ನಾಡಿಗೆ ಹೋಗುತ್ತಿದ್ದ ಸರಕಾರಿ ಬಸ್‌ ಕಾಲೇಜು ಬಳಿ ವಿದ್ಯಾರ್ಥಿಗಳನ್ನು ಹತ್ತಿಸಲು ನಿಂತಿದ್ದು ವಿದ್ಯಾರ್ಥಿಗಳು ಹತ್ತಿದ ಬಳಿಕ ಮುಂದಕ್ಕೆ ಸಾಗಿದ ವೇಳೆ ಹತ್ತನೇ ತರಗತಿಯ ಅನಸ್‌ ಎಂಬ ವಿದ್ಯಾರ್ಥಿ ಓಡಿ ಬಂದು ಬಸ್‌ ಹತ್ತುವ ಸಂದರ್ಭ ವಿದ್ಯಾರ್ಥಿ ಆಯತಪ್ಪಿ ಬಿದ್ದನೆನ್ನಲಾಗಿದೆ.

ಆಯ ತಪ್ಪಿ ಬಿದ್ದರೂ ಒಂದು ಕೈಯಿಂದ ಬಸ್ಸಿನ ರಾಡನ್ನು ಹಿಡಿದಿದ್ದ ಆತನ ಕಾಲುಗಳು ನೆಲಕ್ಕೆ ತಾಗಿಕೊಂಡು ಸುಮಾರು 50 ಮೀಟರ್‌ ಹೋದ ಬಳಿಕ ಚಾಲಕನಿಗೆ ವಿಷಯ ತಿಳಿದು ಬಸ್ಸನ್ನು ನಿಲ್ಲಿಸಿದರೆಂದು ತಿಳಿದು ಬಂದಿದೆ.

ಘಟನೆ ತಿಳಿದ ಸುಳ್ಯ ಪೊಲೀಸರು ಕಾಲೇಜಿಗೆ ಹೋಗಿ ಮಾಹಿತಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next