Advertisement

ಮತ ಎಣಿಕೆಯ ದಿನ ಗೋವಾದ ಜನರಿಗೆ ನಿಜವಾದ ದೀಪಾವಳಿ: ಚೋಡಣಕರ್

03:13 PM Nov 04, 2021 | Team Udayavani |

ಪಣಜಿ: ಗೋವಾದಲ್ಲಿ ಇಂದು ನರಕಾಸುರನ ದಹನ ಮಾಡಲಾಗುತ್ತಿದೆಯಾದರೂ ಬರುವ ಗೋವಾ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನದಂದು ಗೋವಾದ ಜನತೆ ನಿಜವಾದ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ ಎಂದು ಗೋವಾ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್ ನುಡಿದರು.

Advertisement

ಮಾಪ್ಸಾದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಆಯೋಜಿಸಿದ್ದ “ಮಾರಗಾಯಿಸುರ್” ಕಾರ್ಯಕ್ರಮದಲ್ಲಿ ಸಿಲಿಂಡರ್ ಹಿಡಿದ ನರಕಾಸುರನ ಪ್ರತಿಮೆಯನ್ನು ದಹನ ಮಾಡಲಾಯಿತು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ;- ನಾನು ಸತ್ತೆ ಅಂತ ಗೊತ್ತಾಗೋದು ಹೇಗೆ ?
ಇಂದಿನಿಂದ ರಾಕ್ಷಸರನ್ನು ಹೊಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಗೋವಾ ರಾಜ್ಯದ ಜನರು ಅಧಿಕಾರದಲ್ಲಿರುವ ರಾಜ್ಯ ರಾಜಕೀಯ ನರಕಾಸುರರನ್ನು ಖಾಯಂ ಆಗಿ ಮನೆಗೆ ಕಳುಹಿಸಲಿದ್ದಾರೆ. ನಂತರ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನದಂದು ರಾಜ್ಯದ ಜನರೆ ನಿಜವಾದ ದೀಪಾವಳಿ ಆಚರಿಸಲಿದ್ದಾರೆ. ರಾಜ್ಯದ ಜನತೆ ಸದ್ಯ ಎದುರಿಸುತ್ತಿರುವ ಸಂಕಷ್ಟ ಶೀಘ್ರವೇ ದೂರವಾಗಲಿದೆ ಎಂದು ಗಿರೀಶ್ ಚೋಡಣಕರ್ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next