Advertisement

ಅಪಾಯಕಾರಿ ಕೋಡಿ ಕೆಳಕೇರಿ ಗುಂಡಿಗೆ ಸೇತುವೆ ಭಾಗ್ಯ

11:41 PM Nov 13, 2019 | Sriram |

ಕೋಟ: ಸಾಸ್ತಾನ ಸಮೀಪ ಕೋಡಿಕನ್ಯಾಣ ಫಲವತ್ತದ ಕೃಷಿಭೂಮಿ ಹಾಗೂ ಮೀನುಗಾರಿಕೆ, ಉತ್ತಮ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಸುಂದರ ತಾಣ. ಇಲ್ಲಿ ಹರಿಯುವ ಸೀತಾನದಿಗೆ ಕೋಡಿ ಕೆಳಕೇರಿ ಎನ್ನುವಲ್ಲಿ ಸೇತುವೆ ನಿರ್ಮಿಸಿ ಈ ಭಾಗದ ಕೃಷಿಭೂಮಿಗೆ ಸಂಪರ್ಕ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಹಲವು ದಶಕಗಳ ಕನಸಾಗಿತ್ತು. ಇದೀಗ ಇವರ ಬೇಡಿಕೆ ಫಲಿಸಿದ್ದು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯ ಅನುದಾನದಲ್ಲಿ 8.4 ಮೀ ಅಗಲ, 200 ಮೀ. ಉದ್ದದ ಒಟ್ಟು 13.55ಕೋಟಿ ವೆಚ್ಚದ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ನಡೆದಿದೆ.

Advertisement

ದುರಂತ ಕಲಿಸಿತ್ತು ಪಾಠ
ಇಲ್ಲಿನ ಸೀತಾನದಿ ಕೆಳಕೇರಿ ಮತ್ತು ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಗುಂಡ್ಮಿ ತಗ್ಗಿನಬೆ„ಲು ಮಧ್ಯದಲ್ಲಿ ಹರಿಯುತ್ತದೆ ಹಾಗೂ ಕೋಡಿ ನಿವಾಸಿಗಳ ಹತ್ತಾರು ಎಕ್ರೆ ಗದ್ದೆ ಗುಂಡ್ಮಿ ತಗ್ಗಿನಬೈಲಿನಲ್ಲಿದ್ದು ಕೃಷಿ ಚಟುವಟಿಕೆಗಾಗಿ ತುಂಬಿ ಹರಿಯುವ ಹೊಳೆ ದಾಟಬೇಕಾಗಿತ್ತು. ಹೀಗೆ 10 ವರ್ಷದ ಇಲ್ಲಿನ ಕೃಷಿಕ ಮಹಿಳೆಯರು ನದಿಯನ್ನು ದಾಟಿ ನೆಲಗಡಲೆ ಬೆಳೆಯನ್ನು ಕಿತ್ತು, ವಾಪಾಸಾಗುತ್ತಿರುವಾಗ ನದಿಯ ಸೆಳೆತಕ್ಕೆ ಸಿಲುಕಿ ಇಬ್ಬರು ಮƒತಪಟ್ಟಿದ್ದರು ಮತು ಮೂರ್‍ನಾಲ್ಕು ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದರು. ದುರಂತದ ಅನಂತರ ಸೇತುವೆಗಾಗಿ ಹೋರಾಟ ತೀವ್ರಗೊಂಡಿತ್ತು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ರಾಜ್ಯ ಯೋಜನಾ ಅನುಷ್ಠಾನ ಘಟಕ ಮತ್ತು ಚಂಡಮಾರುತ ಉಪಶಮನ ಯೋಜನೆಯ ಮೂಲಕ ಸೇತುವೆಗೆ ಹಣ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷಿ ಮೀನುಗಾರಿಕೆ,
ಪ್ರವಾಸಿತಾಣವಾಗಿ
ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದಿರುವುದರಿಂದ ಈ ಭಾಗದ ಕೃಷಿಚಟುಟವಿಕೆಗೆ ಸಾಕಷ್ಟು ಹಿನ್ನಡೆಯಾಗಿತ್ತು ಹಾಗೂ ಹಲವು ಎಕ್ರೆ ಗದ್ದೆ ಹಡಿಲು ಹಾಕಲಾಗಿತ್ತು. ಇದೀಗ ಸೇತುವೆ, ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಕೃಷಿಚಟುವಟಿಕೆಗೆ ಸಹಾಯವಾಗಲಿದೆ ಮತ್ತು ಈ ಪ್ರದೇಶ ಸುತ್ತಲು ಹಸಿರು ಹಾಗೂ ನೀರಿನಿಂದ ಕೂಡಿದ್ದು ಅತ್ಯಂತ ರಮಣೀಯ ಪ್ರಕೃತಿ ಸೌಂದರ್ಯವನ್ನು ಹೊಂದಿದೆ ಹೀಗಾಗಿ ಪ್ರವಾಸಿ ತಾಣವಾಗಿಯೂ ಮುಂದೆ ಅಭಿವೃದ್ಧಿ ಹೊಂದುವ ಅವಕಾಶವಿದೆ.

ಸಾಲಿಗ್ರಾಮ ಸಂಪರ್ಕ ಹತ್ತಿರ
ಸೇತುವೆ ನಿರ್ಮಾಣವಾದ ಮೇಲೆ ಕೋಡಿ ಕನ್ಯಾಣ ಭಾಗದವರು ಸಾಲಿಗ್ರಾಮ ಭಗವತಿ ರಸ್ತೆಯ ಮೂಲಕ ಡಿವೈನ್‌ ಪಾರ್ಕ್‌ ಹಾಗೂ ಸಾಲಿಗ್ರಾಮವನ್ನು ಸುಮಾರು 2 ಕಿ.ಮೀ ಹತ್ತಿರದಿಂದ ಸಂಪರ್ಕಿಸಬಹುದಾಗಿದೆ.

ಕನಸು ನನಸಾಗಿದೆ
ಈ ಭಾಗದಲ್ಲಿ ಸೇತುವೆ ನಿರ್ಮಾಣವಾಗಬೇಕು ಎನ್ನುವುದು ನಮ್ಮೂರಿನ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ಇದೀಗ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಸಹಕಾರದಿಂದ ಈ ಕನಸು ನನಸಾಗಿದ್ದು ಊರಿನವರಿಗೆ ಸಂತಸ ತಂದಿದೆ.
-ಉದಯ ಕಾಂಚನ್‌ ಕೋಡಿ,
ಸ್ಥಳೀಯ ನಿವಾಸಿ

Advertisement

ಶೀಘ್ರ ಕಾಮಗಾರಿ
ರಾಜ್ಯ ಯೋಜನಾ ಅನುಷ್ಠಾನ ಘಟಕ ಮತ್ತು ಚಂಡಮಾರುತ ಉಪಶಮನ ಯೋಜನೆಯ ಅನುದಾನದಲ್ಲಿ 13.55ಕೋಟಿ ವೆಚ್ಚದಲ್ಲಿ ಸೇತುವೆ, ರಸ್ತೆಗೆ ಹಣ ಬಿಡುಗಡೆಯಾಗಿ ಟೆಂಡರ್‌ ಆಗಿದೆ. ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
-ಹರೀಶ್‌,
ಕಿರಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪಿಡಬ್ಲೂéಡಿ

Advertisement

Udayavani is now on Telegram. Click here to join our channel and stay updated with the latest news.

Next