Advertisement

ಪಿ.ಬಿ.ಶ್ರೀನಿವಾಸ್‌ ಕುರಿತ ಪುಸ್ತಕ ಬಿಡುಗಡೆ 15ರಂದು

12:13 PM Dec 13, 2018 | Team Udayavani |

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕ ಡಾ.ಪಿ.ಬಿ.ಶ್ರೀನಿವಾಸ್‌ ಅವರ ಕುರಿತ ಪುಸ್ತಕದ ಇಂಗ್ಲಿಷ್‌ ಅವತರಣಿಕೆ ಲೋಕಾರ್ಪಣೆ ಕಾರ್ಯಕ್ರಮವನ್ನು ತೆಲುಗು ವಿಜ್ಞಾನ ಸಮಿತಿ ಡಿ.15ರಂದು ನಗರದಲ್ಲಿ ಹಮ್ಮಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಸಮಿತಿ ಅಧ್ಯಕ್ಷ ಡಾ.ಎ.ರಾಧಾಕೃಷ್ಣರಾಜು, ದಕ್ಷಿಣ ಭಾರತದ ಸುಪ್ರಸಿದ್ಧ ಹಿನ್ನೆಲೆ ಗಾಯಕ ಡಾ.ಪಿ.ಬಿ.ಶ್ರೀನಿವಾಸ್‌ ಅವರ ಕುರಿತು ನಿವೃತ್ತ ಆಂಗ್ಲ ಪ್ರಾಧ್ಯಾಪಕರಾದ ಡಾ.ರಂಗನಾಥ ನಂಧ್ಯಾಲ ಅವರು ಕೃತಿ ಹೊರತಂದಿದ್ದು, ಸಂಜೆ 5 ಗಂಟೆಗೆ ವಯ್ನಾಲಿಕಾವಲ್‌ನ ಶ್ರೀಕೃಷ್ಣದೇವರಾಯ ಕಲಾ ಮಂದಿರದಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ. ಹಿರಿಯ ನಟರಾದ ಶ್ರೀನಾಥ್‌, ಶಿವರಾಂಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಪಿ.ಬಿ.ಶ್ರೀನಿವಾಸ್‌ ಅವರು ಹಾಡಿರುವ ಗೀತೆಗಳನ್ನು ಒಳಗೊಂಡ “ರಸ ಸಂಜೆ’ ಕಾರ್ಯಕ್ರಮ ನಡೆಯಲಿದೆ ಎಂದರು. ಲೇಖಕ ಡಾ.ರಂಗನಾಥ ನಂಧ್ಯಾಲ ಮಾತನಾಡಿ, ವರನಟ ಡಾ.ರಾಜ್‌ಕುಮಾರ್‌ ಅವರ ನಟನೆಯ ಹಾಡುಗಳಿಗೆ ಕಂಠದಾನ ಮಾಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next