Advertisement

ನಾನು ಓದಿದ ಪುಸ್ತಕ: ಕಾಲೇಜು ತರಂಗ

11:37 AM Apr 21, 2020 | mahesh |

ಬಿ.ಜಿ.ಎಲ್‌ ಸ್ವಾಮಿಯವರ “ಕಾಲೇಜು ತರಂಗ’, ಹದಿನೈದು ಅಧ್ಯಾಯಗಳ ಸುಂದರ ಲಹರಿ. ಇವರ ಹಸಿರು ಹೊನ್ನು, ಕಾಲೇಜು ರಂಗ ಓದಿರುವವರಿಗೆ, ಈ ಕೃತಿಯ ಪರಿಸರ, ಪಾತ್ರಗಳು ಸಲೀಸಾಗಿ ಅರ್ಥ ವಾಗುತ್ತವೆ. ಕಾಲೇಜಿನ ಪ್ರಿನ್ಸಿಪಾಲ್‌ (ಲೇಖಕರು ) ನುಡಿಗಳಲ್ಲಿ ಕಣ್ಣಿಗೆ ಕಟ್ಟುವಂತೆ ಸೆರೆಹಿಡಿದಿರುವ- ಡೈರೆಕ್ಟರ್‌, ಕರಟಕ- ದಮನಕರೆಂದೇ ಗುರುತಿಸಲ್ಪಟ್ಟಿರುವ
ಮ್ಯಾನೇಜರ್‌- ಹೆಡ್‌- ಕ್ಲರ್ಕ್‌, ಇತ್ಯಾದಿ ಪಾತ್ರಗಳ ಕಲರವ ಓದುವಾಗ, ಎಂಥವರ ಬಿಗಿ ಮುಖವೂ ಸಡಿಲವಾಗುತ್ತದೆ. ಒಂದೊಂದು ತರಂಗವೂ ಧಾರಾಳವಾಗಿ ನಗೆಗಡಲಲ್ಲಿ ಮೀಯಿಸುವ ಸೆಳೆತ ಹೊಂದಿರುವ ಬರಹಗಳು.

Advertisement

ಉದಾಹರಣೆಗೆ- ದಿವ್ಯನಾಮ ಸಂಕೀರ್ತನೆ ಶೀರ್ಷಿಕೆಯ ಲಹರಿಯಲ್ಲಿ, ಶಿಕ್ಷಣಮಂತ್ರಿಗಳ ಆಜ್ಞೆಯಂತೆ ಆಚರಣೆಗೆ ತರುವ, ಮಾಘಮಾಸದ ಭಜನಾ ಗೋಷ್ಠಿಯ ಪ್ರಕರಣ. ಎರಡು ಪಂಗಡಗಳ
ಗೋಷ್ಠಿಯ ಕಾರ್ಯಕ್ರಮ, ನಿರ್ವಹಣೆ, ಅದಕ್ಕಂಟಿ ಬರುವ ಗೊಂದಲ, ತಮಾಷೆ ನಮ್ಮೆದುರೇ ನಡೆಯುವಂತೆ ಭಾಸವಾಗುತ್ತದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ ಎಂಬಂತೆ ಪ್ರಿನ್ಸಿಪಾಲ್, ಡೈರೆಕ್ಟರ್‌ ಅವಸ್ಥೆ ಬೀಳುವುದು… ಇದನ್ನೆಲ್ಲ ಓದಿಯೇ ಎಂಜಾಯ್‌ ಮಾಡಬೇಕು.

ಈ ಪುಸ್ತಕದ ಪ್ಲಸ್‌ ಪಾಯಿಂಟ್‌ ಎಂದರೆ ನಿರೂಪಣೆ. ಪಾತ್ರಗಳ ನಡುವಿನ ಆಡುಭಾಷೆಯಲ್ಲಿ ಸಾಗುವ ಸಂಭಾಷಣೆ, ಸಲೀಸಾಗಿ ಎಲ್ಲರನ್ನೂ ಸೆಳೆಯುತ್ತದೆ. ಕಾಲೇಜಿನ ಪ್ರಿನ್ಸಿಪಾಲ್‌ ಲೇಖನಿಯಲ್ಲಿ, ಕಾಲೇಜಿನಲ್ಲಿ ಬೋಧನೆ, ಪರಿವೀಕ್ಷಣೆ, ಉಪನ್ಯಾಸಕ- ವಿದ್ಯಾರ್ಥಿಗಳ ಸಂಬಂಧ, ಕಚೇರಿ ಆಡಳಿತ, ಒಟ್ಟಾರೆಯಾಗಿ ಶಿಕ್ಷಣದ ಅವಸ್ಥೆ, ವ್ಯವಸ್ಥೆ… ಹೀಗೆ, ಸಾಕಷ್ಟು ವಿಷಯಗಳನ್ನು ತಮಾಷೆಯ ಧಾಟಿಯಲ್ಲಿ ಹೇಳಿರುವುದು. ಇದು ಸಂಗ್ರಹಯೋಗ್ಯ ಪುಸ್ತಕ ಎಂಬುದರಲ್ಲಿ ಎರಡು ಮಾತಿಲ್ಲ.

ಕೆ.ವಿ. ರಾಜಲಕ್ಷಿ

Advertisement

Udayavani is now on Telegram. Click here to join our channel and stay updated with the latest news.

Next