Advertisement

D. Devaraja Arasu State Award: ಜನತೆಯ ಆಶೀರ್ವಾದ ಈಗ ಫಲ ಕೊಟ್ಟಿದೆ: ಕಾಗೋಡು ತಿಮ್ಮಪ್ಪ

11:20 PM Aug 19, 2023 | Team Udayavani |

ಶಿವಮೊಗ್ಗ ಜಿಲ್ಲೆಯ ಸಾಗರದ ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ರವಿವಾರ (ಆ. 20) ಪ್ರಶಸ್ತಿ ಪ್ರದಾನ ನಡೆಯಲಿದೆ.

Advertisement

 ಅರಸು ಪ್ರಶಸ್ತಿಗೆ ಭಾಜನರಾಗಿದ್ದೀರಿ. ಏನನ್ನಿಸುತ್ತಿದೆ?

ನನ್ನ ಹೋರಾಟದ ಜೀವನಕ್ಕೆ ಜನ ಮಾಡಿರುವ ಆಶೀರ್ವಾದ ಇವತ್ತು ಫಲ ಕೊಟ್ಟಿದೆ. ಇದ ರಿಂದ ಖುಷಿ ಆಗಿದೆ. ನಾನು ಬದುಕಿ ರುವವರೆಗೆ ಜನರ ಉಸಿರಾಗಿ ರುತ್ತೇನೆ. ಜನರ ಆಲೋಚನೆ, ವಿಚಾರಗಳನ್ನು ನೆನಪಿಸಿಕೊಳ್ಳುತ್ತಿರುತ್ತೇನೆ. ಜೀವನದಲ್ಲಿ ಇಂತಹ ಅವಕಾಶ ದೊರಕಿರುವುದು ಸಾಗರ ತಾಲೂಕಿನ ಬಡ ಜನರ ಆಶೀರ್ವಾದ ಎಂದು ಭಾವಿಸಿದ್ದೇನೆ. ಇಷ್ಟು ದೊಡ್ಡ ಹೋರಾಟದಲ್ಲಿ ನನ್ನ ಶ್ರಮಕ್ಕಿಂತ ಜನರ ತ್ಯಾಗ, ಪರಿಶ್ರಮವೇ ದೊಡ್ಡದು.  ಒಬ್ಬ ಗೇಣಿ ರೈತ ನನಗೆ ಭೂಮಿ ತಪ್ಪಿಹೋಯಿತು ಎಂದು ಹೇಳಿದ್ದರೆ ಈ ಗೌರವ ಸಿಗುತ್ತಿರಲಿಲ್ಲ.

 ಈ ಪ್ರಶಸ್ತಿ ಬಂದಿದ್ದು ತಡವಾಯಿತು ಅನ್ನಿಸುತ್ತಿದೆಯೇ?

ಇಲ್ಲ. ಇವೆಲ್ಲ ಬಹಳ  ಚಿಂತಿಸಿ ಕೊಡುವ ಪ್ರಶಸ್ತಿಗಳು. ಸರಕಾರಕ್ಕೆ, ಪ್ರಶಸ್ತಿಗೆ ಸೂಕ್ತವಾದ ಮಾನದಂಡಗಳಿರುತ್ತವೆ.  ಸಾಕಷ್ಟು ವಿಚಾರ ವಿನಿಮಯ ಮಾಡಿ ಕೊಡುವ ಪ್ರಶಸ್ತಿ. ಆ ದಾರಿಯಲ್ಲಿ ಹಲವರಿಗೆ ಈ ಪ್ರಶಸ್ತಿ ಸಂದಿದೆ.

Advertisement

 ಸಿಎಂ ಗಾದಿ ಸಿಗಬೇಕು ಅನ್ನಿಸಿಲ್ಲವೇ?

ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಅನಿಸಿಕೆ ಇತ್ತು. ಹಲವರಲ್ಲಿ ಅಂತಹ ಭಾವನೆ ಇದೆ. ಆದರೆ ನಾನು ಎಂದೂ ಅಧಿಕಾರದ ಹಿಂದೆ ಹೋದವನಲ್ಲ. ಅರಸು ಪ್ರಶಸ್ತಿ ಕೂಡ ನನಗೆ ಆಶ್ವರ್ಯವೇ. ಅದು ಬಂದಂತೆ ಸ್ವೀಕರಿಸಿದ್ದಷ್ಟೇ. ಹಾಗಾಗಿ ಮುಖ್ಯಮಂತ್ರಿ ಆಗಿಲ್ಲ ಎಂದು ಏನನ್ನೋ ಕಳೆದುಕೊಂಡೆ ಅಂತ ನನಗೆ ಅನಿಸಿಲ್ಲ.

 ಈಗಿನ ರಾಜಕಾರಣದ ಬಗ್ಗೆ ಏನಂತೀರಿ?

ಈಗಿನವರೂ ರಾಜಕಾರಣಿಗಳೇ. ಅವತ್ತಿನವರೂ ರಾಜಕಾರಣಿಗಳೇ. ಆದರೆ ಜನಸೇವೆಗೆ ಇಳಿದವರಿಗೆ ಇಚ್ಛಾಶಕ್ತಿ ಇರಬೇಕು. ತತ್ವ-ನೀತಿಗಳ ಬಗ್ಗೆ ಬದ್ಧತೆ ಇರಬೇಕು. ಇದು ವ್ಯಾಪಾರವಲ್ಲ. ಜನರ ಸಮಸ್ಯೆ, ಕಾನೂನುಗಳ ಬಗ್ಗೆ ಸಂಕಷ್ಟ ಪರಿಹರಿಸುವ ಕೆಲಸ ಮಾಡಬೇಕು. ನನಗಂತೂ ತೀರಾ ವ್ಯತ್ಯಾಸ ಕಾಣುತ್ತಿಲ್ಲ.

 ಕಾಗೋಡು ಚಳವಳಿಗೆ ಪ್ರೇರಣೆ ಯಾರು?

1952ರಲ್ಲಿ ಕಾಗೋಡಿನಲ್ಲಿ ಭೂ ಹೋರಾಟ ಆರಂಭವಾಯಿತು. ಗೋಪಾಲ ಗೌಡರು ಇದಕ್ಕೆ ಪ್ರೇರಣೆ ನೀಡಿದರು. ನಾನು ಆಗ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದೆ. ಗೋಪಾಲಗೌಡರು ನಮ್ಮ ಮನೆಗೇ ಬಂದು ಉಳಿಯುತ್ತಿದ್ದರು. ಅವರ ಆಚಾರ-ವಿಚಾರಗಳು ನನ್ನ ಮೇಲೆ ಪ್ರಭಾವ ಬೀರಿದವು. ಸಮಾಜವಾದಿ ಸಿದ್ಧಾಂತಕ್ಕೆ ಆಕರ್ಷಿತನಾಗಿ ಅದನ್ನು ಮೈಗೂಡಿಸಿಕೊಂಡೆ. ಮುಂದೆ ನಾನು ಹೆಚ್ಚಿನ ಶಿಕ್ಷಣಕ್ಕೆ ಬೆಂಗಳೂರಿಗೆ ಹೋಗಲು ಅವರೇ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next