Advertisement

ಬಿಜೆಪಿ ವಿರೋಧಿಸಿ ಕಾಂಗ್ರೆಸ್‌ ಬೆಂಬಲಿಸಿ

01:02 PM May 08, 2018 | |

ಮುದ್ದೇಬಿಹಾಳ: ಅತ್ಯಂತ ಪವಿತ್ರವಾದ ಮಾದರಿ ಸಂವಿಧಾನ ಬದಲಿಸುವ ಮಾತು ಕೋಮುವಾದಿ ಪಕ್ಷ ಬಿಜೆಪಿಯಿಂದ ಕೇಳಿಬರುತ್ತಿದೆ. ಸರ್ಕಾರದಲ್ಲಿರುವವರೂ ಇದೇ ಮಾತನ್ನು ಹೇಳುತ್ತಾರೆ. ಸಂವಿಧಾನ ನಿರಂತರ ಜಾರಿಯಲ್ಲಿರಬೇಕಾದರೆ, ದೇಶದಲ್ಲಿ ಜಾತ್ಯಾತೀತ ವ್ಯವಸ್ಥೆ ಮುಂದುವರಿಯಬೇಕಾದರೆ ಬಿಜೆಪಿ ವಿರೋಧಿಸಿ ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ನಾಗಠಾಣ ಶಾಸಕ ಪ್ರೊ| ರಾಜು ಆಲಗೂರ ಕರೆ ನೀಡಿದ್ದಾರೆ.

Advertisement

ಇಲ್ಲಿನ ರಾಂಪುರ ಲಾಡ್ಜ್ನಲ್ಲಿ ಕಾಂಗ್ರೆಸ್‌ನ ಪ್ರಮುಖ ಪದಾಧಿಕಾರಿಗಳು, ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಸಂವಿಧಾನ ಪರಮ ಪವಿತ್ರ. ಅದನ್ನು ನಾವೆಲ್ಲ ಒಪ್ಪಿಕೊಂಡಿದ್ದು ಅದರ ಆಧಾರದ ಮೇಲೆ ಎಲ್ಲವೂ ನಡೆಯುತ್ತಿದೆ. ಇಂಥ ಸಂದರ್ಭ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸಂವಿಧಾನ ಬದಲಾಯಿಸುವ ಮಾತಾಡುತ್ತಿದೆ. ಎಸ್ಸಿ, ಎಸ್ಟಿ ಕಾಯ್ದೆ ಬದಲಾವಣೆಗೆ ಮುಂದಾಗಿದೆ. ಇವರ ಈ ತೀರ್ಮಾನವನ್ನು ಲೋಕಸಭೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ವಿರೋಧಿಸಿದೆ. ಈ ಬಗ್ಗೆ ಪ್ರಧಾನಿ, ರಾಷ್ಟ್ರಪತಿ ಭೇಟಿ ಮಾಡಿ ಮನವಿ ಸಲ್ಲಿಸಿ ಯಥಾಸ್ಥಿತಿ ಕಾಪಾಡುವಂತೆ ಕೋರಲಾಗಿದೆ. ಕಾಂಗ್ರೆಸ್‌ನ ಆಡಳಿತ ಪ್ರಶ್ನಿಸುವ ನೈತಿಕತೆ ಬಿಜೆಪಿಗೆ ಇಲ್ಲ ಎಂದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ್ದಾರೆ. ಮತ್ತೂಂದು ಅವ ಧಿಗೆ ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ ಅಧಿಕಾರ ನಡೆಸುವುದು ನಿಶ್ಚಿತ. ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಸರಳ ವ್ಯಕ್ತಿತ್ವದ ಸಜ್ಜನ ರಾಜಕಾರಣಿ ಶಾಸಕ
ಸಿ.ಎಸ್‌. ನಾಡಗೌಡರನ್ನು ಬೆಂಬಲಿಸಿ ಮತ್ತೂಮ್ಮೆ ಆಯ್ಕೆ ಮಾಡಬೇಕು ಎಂದರು.

ಸಿದ್ದರಾಮಯ್ಯನವರು ರೈತರಿಗೆ ಸಾಲಮನ್ನಾ ಸೇರಿ ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ಸೌಲಭ್ಯ ಒದಗಿಸಿದ್ದಾರೆ. ಎಸ್ಸಿ, ಎಸ್ಟಿ ಜನರಿಗೆ ರಾಜ್ಯದ ಆದಾಯದಲ್ಲಿ 2,7000 ಕೋಟಿ ಹಣ ಖರ್ಚು ಮಾಡಬೇಕೆಂದು ಕಾನೂನು ಮಾಡಿದ್ದಾರೆ. ಸಿದ್ಧಾಂತದ ಮೇಲೆ ರಾಜಕಾರಣ ನಡೆಸುತ್ತಿದ್ದಾರೆ ಎಂದರು. ಗೋವಾ ಕನ್ನಡಿಗರ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ, ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ನಿರ್ದೇಶಕ ವೈ.ಎಚ್‌. ವಿಜಯಕರ್‌, ಪ್ರಮುಖರಾದ ಬಸವರಾಜ ಶಿರೋಳ, ಸುರೇಶ ಗೊಣಸಗಿ, ಚಂದ್ರಶೇಖರ ಕೊಡಬಾಗಿ, ಭೀಮಣ್ಣ ನಾಗೂರ, ರಫೀಕ್‌ ಜಾನ್ವೇಕರ್‌, ಶಿವನಗೌಡ ಮುದ್ದೇಬಿಹಾಳ, ಬಿ.ಎ. ಬಿರಾದಾರ, ಪ್ರಶಾಂತ ಕಾಳೆ, ಭೀಮಣ್ಣ ಬಿಜೂರ, ಪ್ರಕಾಶ ಸರೂರ, ದೇವೇಂದ್ರ ಡೊಂಕಮಡು, ಬಸವರಾಜ ಹಂಡರಗಲ್‌ ಇದ್ದರು.

ಸಭೆ ನಂತರ ವಿಜಯಪುರದಿಂದ ಆಗಮಿಸಿದ್ದ ಶಾಸಕ ರಾಜು ಆಲಗೂರ ನೇತೃತ್ವದಲ್ಲಿ ಎಲ್ಲ ಪ್ರಮುಖರು, ಪ್ರಮುಖ ಕಾರ್ಯಕರ್ತರ ಕೆಲ ಪ್ರದೇಶಗಳಿಗೆ ತೆರಳಿ ನಾಡಗೌಡರ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next