Advertisement

ಪಿರಿಯಾಪಟ್ಟಣದಲ್ಲಿ ಬಿಜೆಪಿ ನೆಲೆಯೂರಲು ಶ್ರಮಿಸಿದ ತಮ್ಮಯ್ಯ

12:56 PM Jun 23, 2017 | |

ಪಿರಿಯಾಪಟ್ಟಣ: ಪಕ್ಷ ಸಂಘಟನೆ ಮತ್ತು ಸಾಮಾಜಿಕ ಕಳಕಳಿಯ ಹೋರಾಟಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ತಾಲೂಕಿನಲ್ಲಿ ಬಿಜೆಪಿ ನೆಲೆಯೂರಲು ಶ್ರಮಿಸಿದ ಧೀಮಂತ ರಾಜಕಾರಣಿ ಡಾ.ಕೆ.ಆರ್‌.ತಮ್ಮಯ ಎಂದು ತಂಬಾಕು ಮಂಡಳಿ ಉಪಾಧ್ಯಕ್ಷ ಪಿ.ವಿ.ಬಸವರಾಜಪ್ಪ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲೂಕು ಬಿಜೆಪಿ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಆರ್‌.ತಮ್ಮಯರ 21 ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮದಲ್ಲಿ ಭಾವ ಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ ಮಾತನಾಡಿದರು.

Advertisement

ವೃತ್ತಿಯಲ್ಲಿ ವೈದ್ಯಕೀಯ ಸೇವೆಯಲ್ಲಿದ್ದು ಸಮಾಜಿಕ ಕಳಕಳಿವುಳ್ಳವರಾಗಿದ್ದ ಡಾ.ಕೆ.ಆರ್‌.ತಮ್ಮಯ ಜನಸಂಘದಲ್ಲಿ ತೊಡಗಿಸಿಕೊಂಡು ನಂತರ ಬಿಜೆಪಿಯಲ್ಲಿದ್ದ ಕೆಲವೇ ಕಾರ್ಯಕರ್ತರೊಂದಿಗೆ ಸಂಘಟನೆಗೆ ಶ್ರಮಿಸಿ, ತಾಲೂಕಿನಲ್ಲಿ ಪಕ್ಷ ನೆಲೆಕಂಡುಕೊಂಡು ಪಕ್ಷದ ಅಭ್ಯರ್ಥಿಯೊಬ್ಬರು ಶಾಸಕರಾಗುವರೆಗೂ ಬೆಳೆಸಿದರು. ಇಂದು ಪಕ್ಷ ಉತ್ತಮ ರೀತಿಯಲ್ಲಿ ಸಂಘಟನೆಗೊಂಡಿದ್ದು ಹೆಚ್ಚು ಕಾರ್ಯಕರ್ತರು ಪಕ್ಷದಲ್ಲಿದ್ದು ಕೆ.ಆರ್‌.ತಮ್ಮಯ್ಯರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಬಿಜೆಪಿ ತಾ.ಅಧ್ಯಕ್ಷ ಪಿ.ಜೆ.ರವಿ ಮಾತನಾಡಿ, ನಿಸ್ವಾರ್ಥ ರಾಜಕಾರಣಿಯಾದ ಡಾ.ಕೆ.ಆರ್‌.ತಮಯ್ಯ ಪಕ್ಷ ಸಂಘಟನೆ ಮಾಡಿದ ಮಾದರಿ ಪ್ರತಿಯೊಬ್ಬರಿಗೂ ಅನುಕರಣೀಯವಾದದು, ಎಂತಹ ತುರ್ತು ಪರಿಸ್ಥಿತಿಯಲ್ಲಿಯೂ ಪಕ್ಷದ ಸಾರಥ್ಯವಹಿಸಿ ತಾಲೂಕಿನಲ್ಲಿ ಪಕ್ಷಕ್ಕೆ ಭದ್ರಬೂನಾದಿ ಹಾಕಿಕೊಟ್ಟಿದ್ದಾರೆ. ಇದರ ಫ‌ಲವೇ ನಾವಿಂದು ಪ್ರಬಲ ಪಕ್ಷವಾಗಿ ಬೆಳೆದಿದ್ದೇವೆ ಎಂದರು.

ಉಪಾಧ್ಯಕ್ಷ ಸತ್ಯಗಾಲಶಿವರಾಮ್‌, ಪ್ರ.ಕಾರ್ಯದರ್ಶಿ ಕಿರಣ್‌ಜೈರಾಮ್‌ಗೌಡ, ಆನಂದ್‌ಕೊಣಸೂರು, ಕಾರ್ಯದರ್ಶಿ ಕರಿಯಪ್ಪ, ಮುಖಂಡರಾದ ಕೆ.ಕೆ.ಶಶಿ, ಬೆಮ್ಮತ್ತಿಕೃಷ್ಣ, ವಕೀಲ ರಾಜೇಗೌಡ, ಗುರುಮೂರ್ತಿ, ರಮೇಶ್‌, ಮೋರ್ಚಾ ಅಧ್ಯಕ್ಷರುಗಳಾದ ಎಸ್‌.ಟಿ.ಕೃಷ್ಣಪ್ರಸಾದ್‌, ಮಹದೇವ್‌, ಪಿ.ಟಿ.ಲಕ್ಷ್ಮೀ ನಾರಾಯಣ, ಕಲಾ ಪ್ರಕೋಷ್ಟದ ಟಿ.ರಮೇಶ್‌, ರಘುಅಬ್ಬಳತಿ, ಮಲ್ಲೇಶ್‌, ಸುಂದರ್‌, ಮೈಲಾರಿ, ದಿಲೀಪ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next