Advertisement

ಬಿಜೆಪಿ ದೇಶದ ಜನರನ್ನು ಮರಳು ಮಾಡಿದೆ

09:20 PM Jun 12, 2019 | Lakshmi GovindaRaj |

ಆನೇಕಲ್‌: ಬಿಜೆಪಿ, ಹಿಂದುತ್ವದ ಹೆಸರಿನಲ್ಲಿ ದೇಶದ ಜನರನ್ನು ಮರಳು ಮಾಡಿದ್ದು, ಕಾಂಗ್ರೆಸ್ಸಿಗರು ಹಿಂದುಗಳೇ ಎಂಬುದನ್ನು ಜನರು ಮರೆಯಬಾರದು ಎಂದು ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.

Advertisement

ತಾಲೂಕಿನ ಸಕಲವಾರ ಗ್ರಾಮದಲ್ಲಿ ಸಮೀದಲ್ಲಿ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೃತಕ ಸರ್ಕಾರವಾಗಿದೆ. ಸರ್ಜಿಕಲ್‌ ಸ್ಟ್ರೈಕ್‌ ಹೆಸರಿನಲ್ಲಿ ಮೋದಿ ಮತ್ತೂಮ್ಮೆ ದೇಶದ ಪ್ರಧಾನಿಯಾಗಿದ್ದಾರೆಯೇ ಹೊರತು ಐದು ವರ್ಷದ ಸಾಧನೆಯಿಂದ ಅಲ್ಲ ಎಂದರು.

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದರು. ನಮ್ಮ ಕಾಂಗ್ರೆಸ್‌ ಮುಖಂಡರು ಚುನಾವಣಾ ಸಂದರ್ಭದಲ್ಲಿ ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ವಿಧಾನ ಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಮತಗಳು ಬಿದ್ದಿವೆ.

ಬಿಳಿ ಬಟ್ಟೆ ಹಾಕಿಕೊಂಡು ಪೋಜು ಕೊಡುವರೆಲ್ಲ ಮೋದಿ ಜೊತೆಯಲ್ಲಿ ನಿಂತು ಪೋಟೋ ತೆಗೆದುಕೊಳ್ಳಿ, ಕೆಲಸ ಮಾಡುವರು ನಮ್ಮ ಜೊತೆಗೆ ಬನ್ನಿ ಎಂದು ಕಾಂಗ್ರೆಸ್‌ ಮುಖಂಡರಿಗೆ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಬೆಂಗಳೂರು ದಕ್ಷಿಣಾ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸನ್ನು ಬಲಿಷ್ಠ ಗೊಳಿಸಲು ಅಗತ್ಯ ಬಿದ್ದರೆ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ವರ್ಧೆ ಮಾಡುವುದಾಗಿ ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.

ಕಾಂಗ್ರೆಸ್‌ನ ಆರ್‌.ಕೆ. ರಮೇಶ್‌, ರಾಮೋಜಿಗೌಡರು, ಸುಷ್ಮಾರಾಜ್‌ ಗೋಪಾಲ್‌ ರೆಡ್ಡಿ, ತಿಮ್ಮಾರೆಡ್ಡಿ, ಆರ್‌.ಕೆ. ಕೇಶವರೆಡ್ಡಿ, ಕುಮಾರ್‌, ಬೇಗೂರು ಆಂಜಿನಪ್ಪ, ಶ್ರೀಧರ್‌, ಬಸವರಾಜ್‌, ಶೋಭಾ ಗೌಡ, ಆಶಾ ನರೇಂದ್ರ ಬಾಬು, ಎಂ.ಬಿ.ಎ. ನಾಗರಾಜ್‌, ಹಾಪ್‌ ಕಾಮ್ಸ್‌ ಬಾಬು ಮತ್ತಿತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next