Advertisement

ಬಿಜೆಪಿ ಬಿಟ್ಟಿದ್ದೇನೆ ಹೊರತು ಸಂಘದ ವಿಚಾರಧಾರೆ ಬಿಟ್ಟಿಲ್ಲ: ಮಾಜಿ ಸಿಎಂ ಪಾರ್ಸೇಕರ್

05:58 PM Apr 07, 2022 | Team Udayavani |

ಪಣಜಿ: ನಾನು ಬಿಜೆಪಿ ಪಕ್ಷವನ್ನು ಬಿಟ್ಟಿದ್ದೇನೆ ಹೊರತು ಸಂಘ ಪರಿವಾರದ ವಿಚಾರಧಾರೆಯನ್ನು ಬಿಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೇಕರ್ ಹೇಳಿದ್ದಾರೆ.

Advertisement

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಂಘದ ಶಾಖೆಯಲ್ಲಿರುವಾಗ ಪಕ್ಷದ ಕೆಲಸ ಮಾಡಬೇಕು ಎಂದು ಸಂಘದ ವತಿಯಿಂದ ಹೇಳಲಾಗುತ್ತಿತ್ತು. ಈ ದೃಷ್ಟಿಯಿಂದ ನಾನು ಬಿಜೆಪಿಯ ಕೆಲಸ ಕಾರ್ಯ ನಿರ್ವಹಿಸಿದೆ. ಸಂಘ ಪರಿವಾರದ ವಿಚಾರಧಾರೆಯನ್ನು ನೋಡಿಯೇ ನಾನು ಬಿಜೆಪಿಗೆ ಬಂದಿದ್ದೆ. ಆದರೆ ಪಕ್ಷ ಬೆಳೆದಂತೆ ತಪ್ಪು ಕಲ್ಪನೆಗಳು ಕೂಡ ಬೆಳೆಯುತ್ತವೆ. ಕೆಲವು ವ್ಯಕ್ತಿಗಳು ನನ್ನನ್ನು ಪಕ್ಷದಿಂದ ದೂರವಿಡಲು ಪ್ರಯತ್ನ ನಡೆಸಿದರು ಎಂದು ಬೇಸರ ಹೊರ ಹಾಕಿದರು.

2017 ರ ವಿಧಾನಸಭಾ ಚುನಾವಣೆಯಲ್ಲಿಯೇ ನನ್ನನ್ನು ಪಕ್ಷದ ಸ್ಥಳೀಯ ಸಮಿತಿಯಿಂದ ದೂರವಿಡುವ ಪ್ರಯತ್ನ ನಡೆಸಲಾಯಿತು. ಇದರಿಂದಾಗಿ ನಾನು ದೂರವೇ ಉಳಿದೆ, ಪಕ್ಷಕ್ಕೆ ರಾಜೀನಾನೆಯನ್ನು ನೀಡಿದೆ ಎಂದರು.

2022 ರ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಫರ್ಧಿಸಿ ಪರಾಭವಗೊಂಡಿದ್ದರೂ ಸಹ ನನಗೆ 6,000 ಮತಗಳು ಬಿದ್ದಿವೆ, ಇದು ನನ್ನ ಗೆಲುವೇ ಆಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಾನು ಎಲ್ಲಿಯೂ ಕೂಡ ಬಹಿರಂಗ ಸಭೆ ನಡೆಸಿಲ್ಲ. ಆದರೂ ಕೂಡ ನನ್ನೊಂದಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನತೆ ಬೆಂಬಲ ನೀಡಿದ್ದಾರೆ. ಬಿಜೆಪಿ ನನಗೆ ಟಿಕೆಟ್ ನೀಡಿದ್ದರೆ ನಾನು ಖಂಡಿತವಾಗಿಯೂ ಜಯಗಳಿಸುತ್ತಿದ್ದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next