Advertisement
ಈ ಹಿಂದೆ ಮಾಜಿ ಪ್ರಧಾನಿ ನವಾಜ್ ಷರೀಫ್ ಬೆನ್ನಿಗೆ ನಿಂತಿದ್ದ ಈ ಉಗ್ರ ಸಂಘಟನೆ, ಈ ಚುನಾವಣೆಯಲ್ಲಿ ಇಮ್ರಾನ್ ಖಾನ್ ಗೆಲುವಿಗಾಗಿ ಎಲ್ಲ ರೀತಿಯ ಸಹಾಯ ಮಾಡಿದೆ. ಇದು ಭಾರತದ ಪಾಲಿಗೂ ಆತಂಕಕ್ಕೆ ಕಾರಣವಾಗಿರುವ ವಿಚಾರ. ಎಲ್ಲೋ ಒಂದು ಕಡೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿದ್ದ ಷರೀಫ್, ಉಗ್ರ ಸಂಘಟನೆಗಳಿಗೆ ಮೂಗುದಾರ ಹಾಕುವ ಕೆಲಸ ಮಾಡಿದ್ದರು. ಇದೇ ಜೈಶ್ ಕೆಂಗಣ್ಣಿಗೂ ಕಾರಣವಾಗಿತ್ತು. ಇದೀಗ ಜೈಶ್ ಮುಖ್ಯಸ್ಥ ಮಸೂದ್ ಅಜರ್ ನೇರವಾಗಿಯೇ ಇಮ್ರಾನ್ ಖಾನ್ ಬೆನ್ನಿಗೆ ನಿಂತಿರುವುದರಿಂದ ಈತನ ಉಗ್ರ ಕೆಲಸಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದೊಂದು ಸುಸಜ್ಜಿತ ಉಗ್ರ ತರಬೇತಿ ಶಿಬಿರ. ಒಂದು ಅಡುಗೆ ಮನೆ, ವೈದ್ಯ ಕೀಯ ಸೌಲಭ್ಯ ಗಳು, ತರಗತಿ ಕೊಠಡಿ ಗಳು, ಅತಿ ದೊಡ್ಡ ನೆಲಮಾಳಿಗೆ ಇದೆ. ಈ ನೆಲಮಾಳಿಗೆಯನ್ನು ತರಬೇತಿ ಪಡೆ ಯುವ ಯುವಕರನ್ನು ಸುರಕ್ಷಿತ ವಾಗಿ ಇರಿ ಸುವುದು ಮತ್ತು ಒಳಾಂಗಣ ಫೈರಿಂಗ್ ತರಬೇತಿಗೆ ಬಳಸಿಕೊಳ್ಳಲಾ ಗು ತ್ತದೆ. ಇದಷ್ಟೇ ಅಲ್ಲ, ಇಲ್ಲಿ ಸ್ವಿಮ್ಮಿಂಗ್ ಫೂಲ್, ಬಿಲ್ಗಾರಿಕೆ ತರಬೇತಿ ಸ್ಥಳ, ಕ್ರೀಡಾಂ ಗಣಗಳನ್ನೂ ನಿರ್ಮಿಸುವ ಯೋಜನೆ ಇದೆಯಂತೆ. ಒಟ್ಟಾರೆ ಯಾಗಿ ತನ್ನ ಎಲ್ಲಾ ಜಿಹಾದಿ ತರಬೇತಿಗಾಗಿ ಇದನ್ನು ಪ್ರಮುಖ ಕೇಂದ್ರವಾಗಿ ಬಳಸಿಕೊಳ್ಳುವ ಯೋಜನೆ ಜೈಶ್ಗೆ ಇದೆಯಂತೆ.
Related Articles
ಪಾಕ್ ಚುನಾವಣೆ ಮತ ಎಣಿಕೆ ಶುಕ್ರವಾರವೂ ಮುಂದುವರಿದಿದೆ. ಪಾಕಿಸ್ಥಾನ ತೆಹ್ರಿಕ್-ಇ-ಇನ್ಸಾಫ್ ಪಕ್ಷ 117 ಸ್ಥಾನಗಳನ್ನು ಪಡೆದುಕೊಂಡು ಅಗ್ರ ಸ್ಥಾನದಲ್ಲಿದೆ. ಇಮ್ರಾನ್ ಖಾನ್ ಅವರಿಗೆ ಸರಕಾರ ರಚಿಸಲು ಪಕ್ಷೇತರರು ಅಥವಾ ಇತರ ಸಣ್ಣ ಪಕ್ಷಗಳ ಬೆಂಬಲ ಬೇಕಾಗುತ್ತದೆ. ಖಾನ್ಗೆ ವಿವಿಐಪಿ ದರ್ಜೆಯ ರಕ್ಷಣೆಯನ್ನು ಸರಕಾರದ ವತಿಯಿಂದ ನೀಡಲಾಗಿದೆ. ಇದೇ ವೇಳೆ ಇಮ್ರಾನ್ ಖಾನ್ರನ್ನು ಸೋಲಿಸುವ ನಿಟ್ಟಿನಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ. ಜನರು ನೀಡಿದ ತೀರ್ಪನ್ನು ಗೌರವಿಸುತ್ತೇವೆ ಎಂದು ಪಿಎಂಎಲ್-ಎನ್ ಹೇಳಿದೆ. ಮೂವರು ಹಿಂದೂ ನಾಯಕರು: ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಮಹೇಶ್ ಕುಮಾರ್ ಮಲಾನಿ ನ್ಯಾಷನಲ್ ಅಸೆಂಬ್ಲಿಯ ಮೊದಲ ಹಿಂದೂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪಾಕ್ನಲ್ಲಿ ಮುಸ್ಲಿಮೇತರರಿಗೆ ಮತದಾನ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಸಿಕ್ಕಿದ 16 ವರ್ಷಗಳ ಬಳಿಕ ಈ ಸಾಧನೆಯಾಗಿದೆ. ಜ್ಞಾನಚಂದ್ ಇಸ್ರಾನಿ ಸಾಂಘರ್ ಮತ್ತು ಹರಿರಾಮ್ ಕಿಶೋರಿಲಾಲ್ ಹೈದರಾಬಾದ್ ಕ್ಷೇತ್ರದಿಂದ ಸಿಂಧ್ ಪ್ರಾಂತ್ಯ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.
Advertisement
ಸುಮಾರು 15 ಎಕರೆ ಜಾಗದಲ್ಲಿ ತಲೆ ಎತ್ತುತ್ತಿದೆ ಈ ಕೇಂದ್ರಪಾಕ್ ಸಂಸತ್ ಚುನಾವಣೆ ವೇಳೆ ಜೈಶ್ನಿಂದ ಇಮ್ರಾನ್ಗೆ ಸಹಾಯ
2001ರ ಸಂಸತ್ ಮೇಲಿನ ದಾಳಿ, 2016ರ ಪಠಾಣ್ಕೋಟ್ ದಾಳಿಗೆ ಜೈಶ್ ಕಾರಣ