Advertisement
ಬೆಳಕಿನ ವರ್ಣ ಚಿತ್ತಾರ ಮತ್ತು ಇಂಪಾದ ಸಂಗೀತ ಕಾರ್ಯಕ್ರಮವು ಕೇರಳ ಪ್ರವಾಸೋದ್ಯಮ ಇಲಾಖೆ ಮೂಲಕ ಆಯೋಜನೆಗೊಳ್ಳಲಿದೆ. ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದ್ದು, ಬೇಕಲ ಕೋಟೆ ವರ್ಣ ಮತ್ತು ಶಬ್ದ ಚಿತ್ತಾರಕ್ಕೆ ಸಜ್ಜಾಗಿದೆ. ಲೆ„ಟ್ ಆ್ಯಂಡ್ ಶೋಗೆ ಅಗತ್ಯವಾದ ಅಂತಿಮ ಹಂತದ ಕೆಲಸ ಕಾರ್ಯಗಳನ್ನು ಶೀಘ್ರದಲ್ಲೆ ಪೂರ್ಣಗೊಳಿಸಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ. ಶಬ್ದ ವರ್ಣಚಿತ್ತಾರಕ್ಕೆ ಪೂರಕವಾದ ವೇದಿಕೆ ಸಜ್ಜಾಗಿದ್ದು, ವಿದ್ಯುತ್ ಪೂರೈಕೆಗೆ ಅಗತ್ಯವಾಗಿರುವ ಟ್ರಾನ್ಸ್ಫಾರ್ಮರ್ ಸ್ಥಾಪನೆಗೆ ಅನುಮತಿ ಲಭಿಸಿದ್ದು, ಒಟ್ಟು 6.6 ಲಕ್ಷ ರೂ.ಗಳನ್ನು ಅನುಮೋದಿಸಲಾಗಿದೆ.
Related Articles
ಭಾರತೀಯ ವೀರ ಅರಸರ ಜೀವನ ಚರಿತ್ರೆ ಹಾಗೂ ಕೋಟೆಯ ಒಳಹೊರಗಿನ ಕತೆಗಳನ್ನು, ಕೆಲವೇ ನಿಮಿಷಗಳಲ್ಲಿ ಅರ್ಥಪೂರ್ಣವಾಗಿ, ಮಾಹಿತಿಪೂರ್ಣ ಚಿತ್ರಣವಾಗಿ ಪ್ರೇಕ್ಷಕರ ಮುಂದಿಡುವುದು ಒಂದು ಸವಾಲು.
Advertisement
ರಸ್ತೆ ಅಭಿವೃದ್ಧಿ ಕಾಞಂಗಾಡು ಕೆ.ಎಸ್.ಡಿ.ಪಿ ರಾಜ್ಯ ಹೆದ್ದಾರಿ ರಸ್ತೆಯಿಂದ ಬೇಕಲ ಕೋಟೆ ತನಕದ 230 ಮೀ. ರಸ್ತೆಯನ್ನು ಕೆ.ಎಸ್.ಡಿ.ಪಿ. ಸಹಾಯದೊಂದಿಗೆ ಮೆಕ್ಡಾಂ ಟಾರಿಂಗ್ ವ್ಯವಸ್ಥೆಗೆ ಒಳಪಡಿಸಲಾಗುವುದು. ರಸ್ತೆಯು ಐದು ಮೀ. ಅಗಲವಿರಲಿದೆ. ಎರಡು ಭಾಗಗಳಲ್ಲಿ ಮರಗಳನ್ನು ನೆಡಲಾಗುವುದು ಹಾಗೂ ಮಾಹಿತಿ ಕೇಂದ್ರ ಸಹಿತ ಪ್ರವೇಶ ದ್ವಾರವನ್ನು ನಿರ್ಮಿಸಲಾಗುವುದು. ಯೋಜನೆಗೆ 5 ಕೋಟಿ ರೂ.ಮೀಸಲಿಡಲಾಗಿದೆ ಎಂದು ಹೇಳಲಾಗಿದೆ. ಸ್ಪೀಡ್ ಬೋಟ್ ಹಾಗೂ ಪ್ಯಾರಾ ಗ್ಲೆ„ಡಿಂಗ್ -ಕೋಟೆಯ ದಕ್ಷಿಣ ಭಾಗದ ಸಮುದ್ರದಲ್ಲಿ ಸ್ಪೀಡ್ ಬೋಟಿಂಗ್, ಪ್ಯಾರಾ ಗ್ಲೆŒ„ಡಿಂಗ್ನಂತಹ ಪ್ರವಾಸಿ ಆಕರ್ಷಣಾ ಯೋಜನೆ ರೂಪಿಸಲಾಗಿದೆ. 1.60 ಕೋಟಿ ರೂ. ವೆಚ್ಚದ ಯೋಜನೆಯನ್ನು ಸರಕಾರಕ್ಕೆ ಸಮರ್ಪಿಸಲಾಗುತ್ತಿದೆ. ಒಟ್ಟು 1.92 ಎಕರೆ ಸ್ಥಳದ ಅವಶ್ಯಕತೆಯಿದೆ. ಪ್ರಥಮ ಹಂತದಲ್ಲಿ 50 ಸೆಂಟ್ಸ್ ಸ್ಥಳದಲ್ಲಿ ಯೋಜನೆಯನ್ನು ಜ್ಯಾರಿಗೆ ತರಲಾಗುತ್ತಿದೆ. ಸಮುದ್ರ ಸಮೀಪವರ್ತಿ ಪ್ರದೇಶದಲ್ಲಿ ಸೆ„ಕಲ್ ಟ್ರ್ಯಾಕ್ ಆರಂಭಿಸುವ ಇರಾದೆಯು ಜಿಲ್ಲಾಡಳಿತಕ್ಕಿದೆ. ಹತ್ತು ಹಲವು ಯೋಜನೆಗಳ ಮೂಲಕ ಬೇಕಲ ಕೋಟೆಯ ಛಾಪು ಹೆಚ್ಚಾಗಲಿದ್ದು ಪ್ರವಾಸಿಗರು ಸೇರಿದಂತೆ ಸ್ಥಳೀಯರಲ್ಲಿ ಹೆಚ್ಚಿನ ಉತ್ಸಾಹವಿದೆ. ಕಾಸರಗೋಡಿನಲ್ಲಿರುವ ಇತಿಹಾಸ ಪ್ರಸಿದ್ಧ ಕೋಟೆ ಕೊತ್ತಲಗಳನ್ನು, ಪುಣ್ಯಕ್ಷೇತ್ರಗಳನ್ನು, ಅರಮನೆಗಳೂ ಸೇರಿದಂತೆ ಅದೆಷ್ಟೋ ಪ್ರೇಕ್ಷಣೀಯ ತಾಣಗಳನ್ನು ಕೂಡಾ ಅಭಿವೃದ್ಧಿ ಪಡಿಸಿದಲ್ಲಿ ಪ್ರವಾಸೋಧ್ಯಮದಲ್ಲಿ ಹೊಸ ಅಧ್ಯಯವನ್ನೇ ಸƒಷ್ಟಿಸಬಹುದಾಗಿದೆ. ಯೋಜನೆ ಪಟ್ಟಿ ತಯಾರಿ
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಪಟ್ಟಿ ತಯಾರಿಸಿ ರಾಜ್ಯ ಸರಕಾರಕ್ಕೆ ನೀಡುವಂತೆ ಕೇಳಿಕೊಳ್ಳಲಾಗಿದೆ. ಫೆ. 15ರ ಒಳಗಾಗಿ ಜಿಲ್ಲೆಯ ಪ್ರವಾಸಿಧಾಮಗಳ ಅಭಿವೃದ್ಧಿಗಾಗಿ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಹಕಾರಿಯಾಗುವಂತೆ ಯೋಜನಾ ಪಟ್ಟಿ ತಯಾರಿ ನಡೆಸಲಾಗಿದ್ದು ಸರಕಾರಕ್ಕೆ ಸಮರ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೇಳಿದ್ದಾರೆ. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಪಿ.ಎ ಸುಬೆ„ರ್ ಕುಟ್ಟಿ, ಡಿಟಿಪಿಸಿ ಕಾರ್ಯದರ್ಶಿ ಬಿಜು ರಾಘವನ್, ಯೋಜನಾಧಿಕಾರಿ ಪಿ.ಸುನಿಲ್ ಕುಮಾರ್ ಎಂಬವರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣವಿದೆ ಎಂದು ಹೇಳಿದ್ದು, ಜಿಲ್ಲೆಯ ಪ್ರವಾಸಿ ತಾಣಗಳು ಸಹಿತ ಆಗತ್ಯವಾಗಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ತಯಾರಿಸಿ ನೀಡಿದ್ದಾರೆ. – ಅಖೀಲೇಶ್ ನಗುಮುಗಂ