Advertisement

ಕಡಲತೀರ ಸ್ವತ್ಛಗೊಳಿಸಿದ ಚಿಣ್ಣರು

07:50 PM Jun 25, 2019 | sudhir |

ಮಂಜೇಶ್ವರ: ಕಡಂಬಾರ್‌ ಎಕ್ಸ್‌ಪೋರರ್‌ ಶಾಲಾ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

Advertisement

ಮಂಜೇಶ್ವರ ಕಡಲ ತೀರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಜೇಶ್ವರ ವೈದ್ಯಾಧಿಕಾರಿ ಶೈನಾ ಅವರು ಪರಿಸರ ಮತ್ತು ಪರಿಸರ ರಕ್ಷಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪ್ರಕೃತಿದತ್ತವಾದ ಸುಂದರ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಡಲ ತೀರವನ್ನು ಸ್ವತ್ಛಗೊಳಿಸಿ ಸಸ್ಯಗಳನ್ನು ನೆಟ್ಟರು.

ಮುಖ್ಯ ಶಿಕ್ಷಕಿ ಪೂರ್ಣಿಮಾ ಎಸ್‌.ರೈ ಸ್ವಾಗತಿಸಿದರು. ಸಹಶಿಕ್ಷಕಿ ಕಲಾವತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next