Advertisement

ಅಂಗಳದೊಳಗೆ ಚೆಂಡು!

06:30 AM Feb 22, 2018 | |

ಚಂದುವಿಗೆ ಕ್ರಿಕೆಟ್‌ ಅಂದ್ರೆ ಪ್ರಾಣ. ದಿನಾ ಸಂಜೆ ತನ್ನದೇ ಸಣ್ಣ ಗ್ಯಾಂಗ್‌ ಜೊತೆ ಗಲ್ಲಿ ಕ್ರಿಕೆಟ್‌ ಆಡ್ತಿದ್ದ. ಸಣ್ಣವನೆಂದು ಎಲ್ಲರೂ ಇವನಿಗೆ ಚೆಂಡು ಎತ್ತಿಕೊಂಡು ಬರಲು ಹೇಳುತ್ತಿದ್ದರು. ಇವರ ಆಟಕ್ಕೆ ತಲೆನೋವಾಗಿದ್ದು ಎದುರಿನ ಮನೆಯ ಅಜ್ಜ. ಅವರ ದೊಡ್ಡ ಕಾಂಪೌಂಡ್‌ನೊಳಗೆ ಚೆಂಡು ಬಿದ್ದರೆ, ಮಕ್ಕಳಿಗೆ ಒಳಗೆ ಬರಲೇ ಬಿಡುತ್ತಿರಲಿಲ್ಲ. ಹೀಗೆ ತಿಂಗಳಲ್ಲಿ ನಾಲ್ಕೈದು ಬಾಲ್‌ ಕಳೆಯುತ್ತಿತ್ತು.

Advertisement

ಆಗ ಚಂದುವಿಗೊಂದು ಉಪಾಯ ಹೊಳೆಯಿತು. ದಿನಾ ಬೆಳಗ್ಗೆ ಪೇಪರ್‌ನವನು ಅಜ್ಜನ ಮನೆಯೆದುರು ಪೇಪರ್‌ ಎಸೆಯುವುದನ್ನು ಚಂದು ನೋಡಿದ್ದ. ಮರುದಿನ ಬೆಳಗ್ಗೆ ಅಜ್ಜ ವಾಕಿಂಗ್‌ ಮುಗಿಸಿ ಬರುವಾಗ ಚಂದು ಪೇಪರ್‌ ಹಿಡಿದು ನಿಂತಿದ್ದ. “ತಾತ, ತಗೊಳಿ ನಿಮ್‌ ಪೇಪರ್‌. ಹೊರಗೆ ಎಸೆದು ಹೋಗಿದ್ರು’ ಅಂತ ಕೊಟ್ಟ. ಅಜ್ಜನಿಗೆ ಖುಷಿಯಾಯ್ತು. ಆಮೇಲಿಂದ ಅಜ್ಜ ಯಾವತ್ತೂ ಮಕ್ಕಳಿಗೆ ಬಾಲ್‌ ಕೊಡಲು ಸತಾಯಿಸಲೇ ಇಲ್ಲ.    

* ಪ್ರಿಯಾಮಣಿ

Advertisement

Udayavani is now on Telegram. Click here to join our channel and stay updated with the latest news.

Next