Advertisement

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

11:23 PM Apr 30, 2024 | Team Udayavani |

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣಗೆ ಟಿಕೆಟ್‌ ಕೊಡುವ ವಿಚಾರದಲ್ಲಿ ಗಂಭೀರವಾಗಿ ಆಲೋಚಿಸಿ ನಿರ್ಣಯ ಕೈಗೊಳ್ಳುವಂತೆ ಕಳೆದ ಡಿ. 8ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ವಕೀಲರೂ ಆದ ಬಿಜೆಪಿ ಮುಖಂಡ ದೇವರಾಜೇಗೌಡ ಬರೆದಿದ್ದ ತುರ್ತು ರಹಸ್ಯ ಪತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Advertisement

ಮಾಜಿ ಸಚಿವ ಎಚ್‌.ಡಿ. ರೇವಣ್ಣ, ಪತ್ನಿ ಭವಾನಿ ರೇವಣ್ಣ, ಪುತ್ರ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ, ಮತ್ತೋರ್ವ ಪುತ್ರ ಸೂರಜ್‌ ರೇವಣ್ಣ ವಿರುದ್ಧ ಅಪಹರಣ, ಅತ್ಯಾಚಾರದಂತಹ ಅಮಾನವೀಯ ಕೃತ್ಯಗಳ ಆರೋಪವಿದ್ದು, ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ವಿಕೃತ ಮನಸ್ಥಿತಿ ಹೊಂದಿದ್ದಾನೆ. ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ರುವುದೂ ಸೇರಿದಂತೆ ಅನೇಕ ರೀತಿಯ ವೀಡಿಯೋಗಳನ್ನು ತಾನೇ ಸೆರೆಹಿಡಿದಿದ್ದಾನೆ. ಪೆನ್‌ಡ್ರೈವ್‌ ಮೂಲಕ ಈ ವೀಡಿಯೋಗಳು ಕಾಂಗ್ರೆಸ್‌ ನಾಯಕರ ಕೈಸೇರಿವೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸಿನವರು ಇದನ್ನು ದುರು ಪಯೋಗ ಮಾಡಿಕೊಳ್ಳುವ ಸಾಧ್ಯತೆ ಗಳಿವೆ. ಹೀಗಾಗಿ ಪ್ರಜ್ವಲ್‌ಗೆ ಟಿಕೆಟ್‌ ಕೊಡುವ ವಿಚಾರ ಮತ್ತು ಮೈತ್ರಿ ವಿಚಾರದಲ್ಲಿ ಪರಿಸ್ಥಿತಿ ಅವಲೋಕಿಸಿ ಕ್ರಮ ವಹಿಸುವುದು ಸೂಕ್ತ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ಪತ್ರವೀಗ ವೈರಲ್‌ ಆಗುತ್ತಿದ್ದು ಎಲ್ಲ ಗೊತ್ತಿದ್ದೂ ಬಿಜೆಪಿ ನಾಯಕರು ಪ್ರಜ್ವಲ್‌ ಟಿಕೆಟ್‌ ಕೊಟ್ಟಿದ್ದರೆ? ಈ ವಿಚಾರ ಜೆಡಿಎಸ್‌ಗೆ ಗೊತ್ತಿದ್ದೂ ಬಿಜೆಪಿಯಿಂದ ಮುಚ್ಚಿಟ್ಟಿತ್ತೇ ಎಂಬ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next