Advertisement

ಬಂಡಿಗೆ ಹಿಂಬದಿಯಿಂದ ಬಸ್ ಢಿಕ್ಕಿ; ಮಹಿಳೆ, ಎತ್ತು ಸ್ಥಳದಲ್ಲೇ ಸಾವು

11:14 PM Apr 05, 2024 | Team Udayavani |

ಕುಳಗೇರಿ ಕ್ರಾಸ್:(ಬಾಗಲಕೋಟೆ) ಹೊಲಕ್ಕೆ ಹೋಗಿ ಬರುತ್ತಿದ್ದ ರೈತನ ಬಂಡಿಗೆ ಹಿಂಬದಿಯಿಂದ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಹಾಗೂ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚಿಮ್ಮನಕಟ್ಟಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

Advertisement

ಮೃತರು ಚಿಮ್ಮನಕಟ್ಟಿ ಗ್ರಾಮದ ನಿವಾಸಿ ತಂಗೆವ್ವ ಹನಮಪ್ಪ ಗಂಜೆಪ್ಪನವರ(65) ಎಂದು ತಿಳಿದುಬಂದಿದ್ದು ಒಂದು ಎತ್ತು ಸಹ ಸ್ಥಳದಲ್ಲೇ ಮೃತಪಟ್ಟಿದೆ ಎತ್ತಿನ ಬಂಡಿ ಹೊಡೆಯುತ್ತಿದ್ದ 35 ವಯಸ್ಸಿನ ಯುವಕ ಹೇಮಂತ ಹನಮಂತ ಗಂಜೆಪ್ಪನವರಗೆ ತಿವ್ರ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ತಾಲೂಕು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎತ್ತಿನ ಬಂಡಿ ಮುರಿದಿದ್ದು ಇನ್ನೊಂದು ಎತ್ತಿಗೆ ತಿವ್ರ ಪೆಟ್ಟಾಗಿದೆ.

ರೈತ ಹೇಮಂತ ತನ್ನ ಹೊಲದ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ರಾಮದುರ್ಗ ಘಟಕದ ಬೆಳಗಾವಿ ಬಾದಾಮಿ ಬಸ್ ಎತ್ತಿನ ಚಕ್ಕಡಿಯ ಹಿಂಬದಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಬಾದಾಮಿ ಪಿಎಸ್‌ಐ ವಿಟ್ಠಲ್ ನಾಯಕ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next