Advertisement

ಯುಪಿ ರೈತರ ಚಿತಾಭಸ್ಮ ಕೃಷ್ಣಾ ನದಿಯಲ್ಲಿ ವಿಸರ್ಜನೆ

11:35 AM Nov 01, 2021 | Team Udayavani |

ಶಹಾಪುರ: ಉತ್ತರ ಪ್ರದೇಶದ ಲಂಖೀಪುರ-ಖೇರಿಯಲ್ಲಿ ರೈತರ ಪ್ರತಿಭಟನೆ ವೇಳೆ ಕಾರು ಹತ್ತಿಸಿ ಕೊಲೆ ಮಾಡಲಾದ ನಾಲ್ವರು ರೈತರ ಚಿತಾಭಸ್ಮವನ್ನು ಭಾನುವಾರ ತಾಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

Advertisement

ಮಾಜಿ ಶಾಸಕ ಬಿ.ಆರ್‌. ಪಾಟೀಲ್‌ ನೇತೃತ್ವದಲ್ಲಿ ರೈತ ಸಂಘದ ಮುಖಂಡರು ಹಾಗೂ ಹೋರಾಟಗಾರರು ಜೊತೆಗೂಡಿ ದೆಹಲಿಯಿಂದ ರೈತರು ಕಳುಹಿಸಿದ ಭಸ್ಮವನ್ನು ನದಿ ದಂಡೆಯ ಬಳಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ನಂತದ ಭಸ್ಮವನ್ನು ನದಿಯಲ್ಲಿ ಹರಿಬಿಟ್ಟರು.

ನಂತರ ಮಾತನಾಡಿದ ಬಿ.ಆರ್‌. ಪಾಟೀಲ್‌, ಕಾವೇರಿ ಮತ್ತು ಇಲ್ಲಿನ ಕೃಷ್ಣಾ ನದಿಯಲ್ಲಿ ಚಿತಾಭಸ್ಮವನ್ನು ಹರಿಬಿಡುವ ಮೂಲಕ ರೈತರ ತ್ಯಾಗ ಹಾಗೂ ಬಲಿದಾನವನ್ನು ದೇಶವು ಯಾವತ್ತು ಮರೆಯುವುದಿಲ್ಲ ಎಂಬ ಆಶಾ ಭಾವನೆ ನಮ್ಮದು. ಹುತಾತ್ಮರಾದ ರೈತರು ನಮ್ಮ ನೀರು, ಗಾಳಿ, ಬೆಳಕಿನ ಜೊತೆ ಇದ್ದಾರೆ ಎಂದರು. ರೈತ ಮುಖಂಡ ಭಾಸ್ಕರರಾವ ಮುಡಬೂಳ ಹಾಗೂ ಶರಣಪ್ಪ ಸಲಾದಪುರ ಮಾತನಾಡಿದರು.

ರೈತ ಮುಖಂಡರಾದ ಹಣಮಂತ ವಾಲ್ಮೀಕಿ, ಹಣಮಂತ ಭಂಗಿ, ಹಣಮಂತ ಬೆಣಕಲ್‌, ಭೀಮಸೇನರಾವ ಕುಲಕರ್ಣಿ, ಶಿವರಡ್ಡಿ ಕೊಳ್ಳೂರ, ಮಲ್ಲಣ್ಣ ಪರಿವಾಣ, ಶೌಕತ್‌ ಅಲಿ, ಉಮಾಪತಿ ಪಾಟೀಲ್‌, ಜಂಬಯ್ಯ ದೊರೆ, ಭೀಮಣ್ಣಗೌಡ ಹುಲಕಲ್‌, ಉಮೇಶ ಮುಡಬೂಳ, ಅರವಿಂದ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next