Advertisement

ಬಿಡುಗಡೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾ

12:30 AM Mar 02, 2019 | |

ಪಾಕಿಸ್ಥಾನದ ವಶದಲ್ಲಿದ್ದ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ರನ್ನು ಭಾರತಕ್ಕೆ ಹಸ್ತಾಂತರಿಸಬಾರದು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಶುಕ್ರವಾರ ಬೆಳಗ್ಗೆ ಇಸ್ಲಾಮಾಬಾದ್‌ ಹೈಕೋರ್ಟ್‌ ವಜಾ ಮಾಡಿತ್ತು. ಪಾಕಿಸ್ತಾನಿ ನಾಗರಿಕರೊಬ್ಬರು ಈ ಅರ್ಜಿಯನ್ನು ಸಲ್ಲಿಸಿದ್ದರು. ಅಭಿನಂದನ್‌ ನಮ್ಮ ದೇಶಕ್ಕೆ ಕೆಡುಕು ಮಾಡಲು ಬಂದಿದ್ದರು. ವಾಯುಗಡಿ ಉಲ್ಲಂ ಸಿ ಬಂದಿದ್ದ ಅವರನ್ನು ಇಲ್ಲೇ ಸೆರೆಯಲ್ಲಿ ಇರಿಸಿ, ಇಲ್ಲೇ ಶಿಕ್ಷೆಗೆ ಗುರಿಪಡಿಸಬೇಕು. ಅವರ ಬಿಡುಗಡೆಗೆ ತಡೆ ತರಬೇಕು ಎಂದು ಅರ್ಜಿದಾರರು ಕೇಳಿದ್ದರು. ಆದರೆ, ಹೈಕೋರ್ಟ್‌ ಈ ಅರ್ಜಿಯ ವಿಚಾರಣೆಗೇ ನಿರಾಕರಿಸಿ, ಅರ್ಜಿ ವಜಾ ಮಾಡಿತು.

Advertisement

ನಮ್ಮ ಶತ್ರುಗಳ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ, ವಿಂಗ್‌ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಮತ್ತೆ ಸ್ವದೇಶಕ್ಕೆ ವಾಪಸಾಗಿದ್ದಾರೆ. ಹೆಮ್ಮೆಯ ಯೋಧನಿಗೆ ಆತ್ಮೀಯ ಸ್ವಾಗತ.
ಮೋಹನ್‌ ಭಾಗವತ್‌, ಆರ್‌ಎಸ್‌ಎಸ್‌ ಮುಖ್ಯಸ್ಥ

ವಿಂಗ್‌ ಕಮಾಂಡರ್‌ ಅಭಿನಂದನ್‌ ಭಾರತಕ್ಕೆ ಮರಳಿದ್ದು ಸಂತೋಷ ತಂದಿದೆ. ಅವರನ್ನು ಈಗ ಸಮಗ್ರ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯುತ್ತೇವೆ.
ಏರ್‌ ವೈಸ್‌ ಮಾರ್ಷಲ್‌ ಆರ್‌.ಜಿ.ಕೆ.ಕಪೂರ್‌, ಐಎಎಫ್ ಉಪ ಮುಖ್ಯಸ್ಥ

ಕೇಂದ್ರ ಸರಕಾರದ ಸಮರ್ಥ ರಾಜತಾಂತ್ರಿಕ ನಡೆಗಳ ಪರಿಣಾಮದಿಂದ ಅಭಿನಂದನ್‌ ಬಿಡುಗಡೆಯಾಗಿದೆ. ಅನೇಕ ರಾಷ್ಟ್ರ ಗಳ ಜತೆಗೆ ಭಾರತ ಬಾಂಧವ್ಯ ವೃದ್ಧಿಸಿರುವುದು ಅನುಕೂಲವಾಗಿದೆ.
ಸುಮಿತ್ರಾ ಮಹಾಜನ್‌, ಲೋಕಸಭೆ ಸ್ಪೀಕರ್‌

ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರೇ, ನಿಮ್ಮ ಘನತೆ, ಪರಾಕ್ರಮ ಹಾಗೂ ಶೌರ್ಯವು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ದೇಶಕ್ಕೆ ನಿಮಗಿದೋ ಪ್ರೀತಿಯ ಸ್ವಾಗತ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next