Advertisement

Devadurga ಜೈಲಿನ 15 ಅಡಿ ಎತ್ತರದ ಗೋಡೆ ಏರಿ ಕೊಲೆ ಆರೋಪಿ ಪರಾರಿ

09:54 PM Sep 03, 2023 | Team Udayavani |

ದೇವದುರ್ಗ: ಮೂರು ತಿಂಗಳ ಹಿಂದೆ ವ್ಯಕ್ತಿಯೊಬ್ಬನನ್ನು ಕೊಂದ ಆರೋಪದಲ್ಲಿ ಜೈಲು ಸೇರಿದ್ದ ಅನ್ವರ್‌ ಪಾಷ್‌ ಖಾಜಾಹುಸೇನ್‌ ರವಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಉಪಕಾರಾಗೃಹದಿಂದ ಪರಾರಿಯಾಗಿದ್ದಾನೆ. ಸೂಪರಿಟೆಂಡೆಂಟ್‌ ಸಹಿತ ಐದಾರು ಸಿಬಂದಿ ಕರ್ತವ್ಯದಲ್ಲಿದ್ದರೂ ಗೋಡೆ ಏರಿ ಆರೋಪಿ ತಪ್ಪಿಸಿಕೊಂಡಿದ್ದಾನೆ.

Advertisement

15 ನಿಮಿಷಗಳಲ್ಲಿ 15 ಅಡಿ ಗೋಡೆ ಏರಿ ಪರಾರಿಯಾಗಿದ್ದು, ಮೇಲಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದೆ.

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅನ್ವರ್‌ ಬಂಧನಕ್ಕೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಆರೋಪಿ ಗೋಡೆ ಮೇಲಿಂದ ಜಿಗಿದು ಪರಾರಿಯಾಗುತ್ತಿರುವುದು ಸಿಸಿಕೆಮರಾದಲ್ಲಿ ಸೆರೆಯಾಗಿದೆ. ಆದರೆ ಗೋಡೆ ಏರುವ ದೃಶ್ಯ ಸೆರೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next