Advertisement

40 ಕಿಮೀ ಚಕ್ಕಡಿ ಎಳೆದು ಸಾಗಿ ಯಲ್ಲಮ್ಮ ನ ದರ್ಶನ ಪಡೆದ ಸಾಹಸಿ

07:00 PM Jan 25, 2021 | Team Udayavani |

ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಯುವಕನೊಬ್ಬ ಕಬ್ಬಿಣದ ಚಕ್ಕಡಿ ಎಳೆದುಕೊಂಡು ಸುಕ್ಷೇತ್ರ ಯಲ್ಲಮ್ಮಗುಡ್ಡ ತಲುಪಿ ಸಾಹಸ ಮೆರೆದಿದ್ದಾನೆ. ಭೈರನಹಟ್ಟಿ ಗ್ರಾಮದ ಮುತ್ತಪ್ಪ ಮರಿನಾಯ್ಕರ ಕಬ್ಬಿಣದ ಚಕ್ಕಡಿಯೊಂದನ್ನು ಭೈರನಹಟ್ಟಿ ಗ್ರಾಮದಿಂದ ಸುಮಾರು 40 ಕಿಮೀ ಎಳೆದೊಯ್ದು, ಯಲ್ಲಮ್ಮಗುಡ್ಡದ ರೇಣುಕಾದೇವಿ ದರ್ಶನ ಪಡೆದಿದ್ದಾನೆ.

Advertisement

ಇದನ್ನೂ ಓದಿ:ಜಮೀನುಗಳಲ್ಲಿ ಅರಣ್ಯ ಕೃಷಿ ಮಾಡಿ

ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಪೂಜೆ ಸಲ್ಲಿಸಿ ಶನಿವಾರ ಸಂಜೆ 5:30ಕ್ಕೆ ಶ್ರೀಮಠದ ಆವರಣದಿಂದ ಹೊರಟಿದ್ದು, ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ನರಗುಂದ ಮೂಲಕ ಹಾಯ್ದು ಯಲ್ಲಮ್ಮಗುಡ್ಡವನ್ನು ತಡರಾತ್ರಿ 12:30ಕ್ಕೆ ತಲುಪಿದ್ದಾನೆ. ಈತನಿಗೆ ದೊರೆಸ್ವಾಮಿ ವಿರಕ್ತಮಠದ ಶ್ರೀ ಗೌರವಿಸಿದರು

Advertisement

Udayavani is now on Telegram. Click here to join our channel and stay updated with the latest news.

Next