Advertisement

22ನೇ ವರ್ಧಂತ್ಯುತ್ಸವ ಸಂಪನ್ನ

01:00 AM Mar 07, 2019 | Team Udayavani |

ಮಲ್ಪೆ: ಮಲ್ಪೆ ಬಾಪುತೋಟ ಪಡುಗುಡ್ಡೆ ಶ್ರೀ ಕ್ಷೇತ್ರ ಸರ್ವೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳವರೆಗೆ ನಡೆದ 22ನೇ ವರ್ಧಂತ್ಯುತ್ಸವವು ಕಾರ್ಯಕ್ರಮಗಳು ಮಾ. 6ರಂದು ಸಂಪನ್ನಗೊಂಡಿತು.

Advertisement

ಬುಧವಾರ ಬೆಳಗ್ಗೆ ಕೋಟ ಚಂದ್ರಶೇಖರ ಸೋಮಯಾಜಿ ಅವರ ನೇತೃತ್ವದಲ್ಲಿ ಸರ್ವೇಶ್ವರ ಸನ್ನಿಧಿಯಲ್ಲಿ ಬ್ರಹ್ಮಕಲಶ ಸ್ಥಾಪನೆಯಾಗಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಜರಗಿತು. ಮಧ್ಯಾಹ್ನ ಮಹಾಪೂಜೆ , ಅನ್ನಸಂತರ್ಪಣೆ ನಡೆಯಿತು.  ಮೀನುಗಾರರ ಶ್ರೇಯೋಭಿವೃದ್ಧಿ,  ಮತ್ಸÂ ಸಂಪತ್ತಿನ ವೃದ್ದಿಗೆ ಸಾಮೂಹಿಕ ಪ್ರಾರ್ಥನೆ  ಸಲ್ಲಿಸಲಾಯಿತು.

ಸಂಜೆ ಕಿದಿಯೂರು ಪಡುಕರೆ ರಾಮಮಿತ್ರ ಭಜನ ಮಂದಿರದ ತಂಡದಿಂದ ಭಜನ ಕಾರ್ಯಕ್ರಮ ನಡೆಯಿತು. 
ಕ್ರೇÒತ್ರಾಡಳಿತ, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಮಹಿಳಾ ಮಂಡಳಿಯ ಸದಸ್ಯರು,  ಊರು ಹತ್ತು ಸಮಸ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next