Advertisement
17 ನಿಮಿಷದಲ್ಲಿ ಕೆಡವಿದ್ದೆವು: ಬಾಬ್ರಿ ಮಸೀದಿಯನ್ನು 17 ನಿಮಿಷಗಳಲ್ಲಿ ನಾವು ಕೆಡವಿದ್ದೆವು. ಆದರೆ ರಾಮ ಮಂದಿರ ನಿರ್ಮಾಣ ಮಾಡಲು ಯಾಕೆ ಸರ್ಕಾರ ಇಷ್ಟು ವಿಳಂಬ ಮಾಡುತ್ತಿದೆ ಎಂದು ಶಿವಸೇನೆ ಪ್ರಶ್ನಿಸಿದೆ.
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ವಿವಾದದ ಮಧ್ಯೆಯೇ ದೆಹಲಿ ಜಾಮಾ ಮಸೀದಿಯನ್ನು ಕೆಡವಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿವಾದಿತ ಹೇಳಿಕೆ ನೀಡಿದ್ದಾರೆ. ಜಾಮಾ ಮಸೀದಿಯ ಮೆಟ್ಟಿಲಿನ ಕೆಳಗೆ ಮೂರ್ತಿಗಳು ಸಿಗದಿದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ. ನಾನು ರಾಜಕೀಯಕ್ಕೆ ಬಂದ ಮೊದಲ ದಿನದಿಂದಲೂ ಈ ಮಾತನ್ನು ಹೇಳುತ್ತಿದ್ದೇನೆ. ಈಗಲೂ ಈ ಮಾತಿಗೆ ನಾನು ಬದ್ಧ ಎಂದಿದ್ದಾರೆ.