Advertisement

ನನ್ನ  ಸತ್ಕರ್ಮದ ಫ‌ಲವೇ ಆ ಸಿಕ್ಸರ್‌: ಕಾರ್ತಿಕ್‌

07:30 AM Mar 22, 2018 | |

ಚೆನ್ನೈ: ಬಾಂಗ್ಲಾ ವಿರುದ್ಧ ತ್ರಿಕೋನ ಟಿ20 ಫೈನಲ್‌ನಲ್ಲಿ ತಾನು ಬಾರಿಸಿದ ಸಿಕ್ಸರ್‌, ತನ್ನ ಉತ್ತಮ ಕರ್ಮದ ಫ‌ಲ ಎಂದು ದಿನೇಶ್‌ ಕಾರ್ತಿಕ್‌ ಹೇಳಿಕೊಂಡಿದ್ದಾರೆ! ತಾನು ಜೀವನದಲ್ಲಿ ಒಬ್ಬ ವ್ಯಕ್ತಿಯಾಗಿ, ಕ್ರಿಕೆಟಿಗನಾಗಿ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆ ಒಳ್ಳೆಯ ಕರ್ಮವೇ ನಾನು ಸಿಕ್ಸರ್‌ ಬಾರಿಸಲು ನೆರವಾಗಿದೆ ಎಂದು ಭಾವಿಸುತ್ತೇನೆ ಎಂದು ಅವರು ತಮ್ಮ ಅದ್ಭುತ ಇನ್ನಿಂಗ್ಸ್ ನ್ನು ವಿಶಿಷ್ಟವಾಗಿ ವ್ಯಾಖ್ಯಾನಿಸಿದ್ದಾರೆ.

Advertisement

ಕೊಲಂಬೊದಲ್ಲಿ ಮುಗಿದ ಫೈನಲ್‌ನಲ್ಲಿ ಕಾರ್ತಿಕ್‌ ಕೇವಲ 8 ಎಸೆತ ಎದುರಿಸಿ 29 ರನ್‌ ಗಳಿಸಿದರು. ಅದು ಅವರ ಜೀವನವನ್ನೇ ಬದಲಿಸಿದ ಇನ್ನಿಂಗ್ಸ್‌. ಬಾಂಗ್ಲಾ ವಿರುದ್ಧದ ಫೈನಲ್‌ನ ಅಂತಿಮ ಎಸೆತದಲ್ಲಿ ಅವರು ಬಾರಿಸಿದ ಸಿಕ್ಸರ್‌ನಿಂದ ಭಾರತ ಅದ್ಭುತ ಗೆಲುವು ಗಳಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next