Advertisement

ಆ. 15ರಂದು ಪ್ಲಾಸ್ಟಿಕ್‌ ಮುಕ್ತ ಪಟ್ಟಣ ಘೋಷಣೆ

03:16 PM May 18, 2019 | Team Udayavani |

ಹೊಳೆನರಸೀಪುರ: ಪಟ್ಟಣವನ್ನು ಆಗಸ್ಟ್‌ 15 ರಂದು ಪ್ಲಾಸ್ಟಿಕ್‌ ಮುಕ್ತ ಪಟ್ಟಣದ ಎಂದು ಘೋಷಣೆ ಮಾಡಲಾಗುತ್ತಿದ್ದು, ಅದಕ್ಕಾಗಿ ಜೂನ್‌ ಒಂದರಿಂದ ಪಟ್ಟಣದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಿಸುವ ಕುರಿತು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಸ್ತುತ ಪಟ್ಟಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಪರಿಸರಕ್ಕೆ ತೀವ್ರ ದಕ್ಕೆ ಉಂಟಾಗಿದೆ. ಆದ್ದರಿಂದ ಶನಿವಾರದಿಂದಲೇ ಪ್ಲಾಸ್ಟಿಕ್‌ ನಿಷೇಧಕ್ಕೆ ಚಾಲನೆ ನೀಡಲು ಬಂದಿರುವುದಾಗಿ ತಿಳಿಸಿದರು.

ಪ್ಲಾಸ್ಟಿಕ್‌ ಬಳಕೆಯಿಂದ ಸಮಾಜದ ಮೇಲೆ ತೀವ್ರವಾದ ಪರಿಣಾಮ ಬೀರಿದ್ದು ಪ್ಲಾಸ್ಟಿಕ್‌ ತಡೆಗಟ್ಟಲು ಕಾನೂನಿನ ಕ್ರಮದ ಜೊತೆಗೆ ಸಮಾಜದ ಪ್ರತಿಯೊಬ್ಬರು ಸಹ ಕಟಿಬದ್ಧರಾಗಿ ನಿಷೇಧ ಜಾರಿಗೆ ತರುವಲ್ಲಿ ಕೈಜೋಡಿಸುವಂತೆ ಕೋರಿದರು.

ಜೂನ್‌ ಒಂದರಿಂದ ಪಟ್ಟಣದಲ್ಲಿ ಶಾಶ್ವತವಾಗಿ ಪ್ಲಾಸ್ಟಿಕ್‌ ಮುಕ್ತಗೊಳಿಸಲು ತಾಲೂಕು ಆಡಳಿತ ಹತ್ತು ತಂಡಗಳನ್ನು ರಚಿಸಿ ನಿತ್ಯವೂ ಪಟ್ಟಣದಲ್ಲಿ ಪ್ಲಾಸ್ಟಿಕ್‌ ಮಾರಾಟ ಮಾಡುವ ಮತ್ತು ಅದನ್ನು ಉಪಯೋಗಿಸುವ ವರ್ತಕರ ಅಂಗಡಿಗಳ ಮೇಲೆ ದಾಳಿ ನಡೆಸಲಾಗುವುದು ಅದಕ್ಕಾಗಿ ಈಗಾಗಲೇ ತಂಡಗಳನ್ನು ರಚಿ ಸಿದ್ದು, ಪ್ರತಿ ತಂಡದಲ್ಲಿ ಸರ್ಕಾರಿ ಇಲಾಖೆಯ ಒರ್ವ ಅಧಿಕಾರಿ , ಪುರಸಭೆ ಅಧಿಕಾರಿ ಮತ್ತಿತರರು ಇರಲಿದ್ದಾರೆ ಎಂದರು.

ಸಭೆಯಲ್ಲಿ ಹಾಜರಿದ್ದ ತಾಲೂಕು ವರ್ತಕರ ಸಂಘದ ಕಾರ್ಯದರ್ಶಿ ಮಾತನಾಡಿ, ಈ ಹಿಂದೆ ಪುರಸಭೆ ಮುಖ್ಯಾಧಿ ಕಾರಿ ಗಳು ಮತ್ತಿತರರು ಕರೆದಿದ್ದ ಸಭೆಯಲ್ಲಿ ವರ್ತಕ ಸವ ುುದಾಯದ ಮುಖಂಡುರಿದ್ದು, ಆ ಸಭೆಯಲ್ಲಿ ಪ್ಲಾಸ್ಟಿಕ್‌ ನಿಷೇಧ ಕುರಿತ ಚರ್ಚೆಯಲ್ಲಿ ಏಕಾಏಕಿ ಪ್ಲಾಸ್ಟಿಕ್‌ ನಿಷೇಧ ಮಾಡುವುದು ಬೇಡ ಜೂನ್‌ ಒಂದರವರೆಗೆ ವರ್ತಕರಿಗೆ ತಿಳಿ ಹೇಳಿ ಪ್ಲಾಸ್ಟಿಕ್‌ ಬಳಕೆ ಮತ್ತು ವ್ಯಾಪಾರ ಮಾಡುವುದು ಬೇಡೆವೆಂದು ಅರಿವು ಮೂಡಿಸುತ್ತೇವೆ ಎಂದರು.

Advertisement

ಅದಕ್ಕೆ ಸಹಮತ ವ್ಯಕ್ತ ಪಡಿಸಿದ ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜು ಇದಕ್ಕೆ ಬೇಕಾದ ಕಾರ್ಯಕ್ರಮಗ ಳನ್ನು ಹಮ್ಮಿಕೊಂಡು ಸಾರ್ವಜನಿಕರು ಮತ್ತು ವರ್ತಕರುಗಳಿಗೆ ಅರಿವು ಮೂಡಿಸಲು ವರ್ತಕರ ಸಂಘ ಸಹಕರಿಸುವಂತೆ ತಿಳಿಸಿದರು.

ಈ ಸಭೆಗೆ ಕೇವಲ ಒಂದೇ ಒಂದು ವರ್ತಕ ಸಂಘದ ಹಾಜ ರಾತಿ ಇದೆ, ಆದರೆ ಪಟ್ಟಣದ ಇನ್ನು ಮೂರು-ನಾಲ್ಕು ಸಂಘ ಗಳಿದ್ದು, ಅವುಗಳನ್ನು ಈ ನಿಷೇಧ ಕಾರ್ಯಕ್ರಮಕ್ಕೆ ಸೇರ್ಪಡೆ ಮಾಡಿಕೊಳ್ಳುವುದರಿಂದ ಪ್ಲಾಸ್ಟಿಕ್‌ ನಿಷೇಧದ ಕಾರ್ಯಕ್ರಮ ಸಫಲತೆ ಕಾಣಲು ಸಾಧ್ಯವಿದೆ ಎಂದು ಸಭೆ ನಿರ್ಧರಿಸಿತು.

ಸಾರ್ವಜನಿಕರುಗಳು ತಮ್ಮಲ್ಲಿನ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಪ್ಲಾಸ್ಟಿಕ್‌ ನಿಷೇಧಕ್ಕೆ ಮೊದಲು ಅದಕ್ಕೆ ಪರ್ಯಾಯ ವ್ಯವಸ್ಥೆ ಬಗ್ಗೆ ತೀವ್ರವಾಗಿ ಚರ್ಚೆ ನಡೆಯಿತು. ಉಪವಿಭಾಧಿಕಾರಿ ಎಚ್.ಎಲ್.ನಾಗರಾಜು ಅವರೊಂದಿಗೆ ಆಗಮಿಸಿದ್ದ ಅಧಿಕಾರಿಗಳು ಪ್ಲಾಸ್ಟಿಕ್‌ಗೆ ಪರ್ಯಾಯÊಾಗಿ ಬೇಕಾದ ಸಲಕರಣೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಕೆ. ಶ್ರೀಧರ್‌, ತಾಲೂಕು ಸ್ವಾಮಿ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ಎಂ.ಎಂ.ಎ.ರಹೆಮಾನ್‌ ಸೇರಿದಂತೆ ಪಟ್ಟಣದ ಬೆರ ಳೆಣಿಕೆಯಷ್ಟು ಮಂದಿ ವರ್ತಕರು ಮತ್ತು ವಿವಿಧ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ತಾಲೂಕು ವೈದ್ಯಾಧಿಕಾರಿ ಎಚ್.ಎನ್‌.ರಾಜೇಶ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next