Advertisement

ದಲಿತರ ಮನೆಯಲ್ಲಿ ತಹಶೀಲ್ದಾರ್‌ ಭೋಜನ

04:52 PM Mar 22, 2021 | Team Udayavani |

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ತಹಶೀಲ್ದಾರ್‌ ಆಶಪ್ಪ ಪೂಜಾರಿ ಹಾಗೂ ಸಿಬ್ಬಂದಿ ದಲಿತ ಕುಟುಂಬದ ಹೂವಕ್ಕ ಯಲ್ಲಪ್ಪ ಅವರ ಮನೆಯಲ್ಲಿ ಭೋಜನ ಸವಿದರು.

Advertisement

ಹೂವಕ್ಕ ಯಲ್ಲಪ್ಪ ಅವರ ಮನೆಯಲ್ಲಿ ತಯಾರಿಸಿದ್ದ ಅನ್ನ, ನುಗ್ಗೇಕಾಯಿ ಸಾರು, ಉಪ್ಪಿನಕಾಯಿ ನಂಚಿಕೊಂಡು ರಾತ್ರಿ ಊಟವನ್ನು ಸವಿದರು. ಗ್ರಾಪಂ ಅಧ್ಯಕ್ಷ ಮದಾರಸಾಬ ಸಿಂಗನಮಲ್ಲಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಎಲಿವಾಳ, ಎಸ್‌.ಎಸ್‌ .ಬಿಚ್ಚಾಲಿ, ಮುತ್ತು ಪಾಟೀಲ ಮತ್ತಿತರರು ಸಾಥ್‌ ನೀಡಿದರು.

ಜಲ ಜೀವನ್‌ ಕಾಮಗಾರಿಗೆ ಚಾಲನೆ :ಮುಳಗುಂದ: ನಾಗಾವಿ ತಾಂಡಾದಲ್ಲಿರಾಷ್ಟ್ರೀಯ ಜಲ ಜೀವನ್‌ ಮಿಷನ್‌ಕಾಮಗಾರಿಗೆ ಶಾಸಕ ಎಚ್‌.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದಅವರು, ಒಟ್ಟು 84 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನುಗುಣಮಟ್ಟದಿಂದ ಶೀಘ್ರದಲ್ಲಿಯೇಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ವಾಸಣ್ಣಕುರಡಗಿ, ಬಿ.ಆರ್‌.ದೇವರಡ್ಡಿ, ಗ್ರಾಪಂಉಪಾಧ್ಯಕ್ಷ ಸುರೇಶ ಪವಾರ, ಮಾಜಿಉಪಾಧ್ಯಕ್ಷ ದಯಾನಂದ ಪವಾರ, ಗೌರಿ ತೋಟದ, ಕುಮಾರ ಪವಾರ,ಯಮನಪ್ಪ ನಾಯಕ, ಮೀರವ್ವಲಮಾಣಿ, ಕುಬೇರಪ್ಪ ರಾಠೊಡ,ಮಾನಪ್ಪ ತೋಟದ,ರಾಮಪ್ಪ ಪವಾರ,ತುಕಾರಾಮ ಕಟ್ಟಿಮನಿ,ಸುಭಾಷಲಮಾಣಿ, ಈರಪ್ಪ ನಾಯಲ, ಅನಿಲ ಪವಾರ ಇತರರಿದ್ದರು.

Advertisement

ಗ್ರಾಪಂ ಅಧ್ಯಕ್ಷರು-ಸದಸ್ಯರಿಗೆ ಸನ್ಮಾನ :

ನರಗುಂದ: ತಾಲೂಕಿನ ಸಂಕದಾಳ ಗ್ರಾಮದಲ್ಲಿ ವೀರಭದ್ರ ಸ್ವಾಮಿ ಬ್ರಹ್ಮೋತ್ಸವ ಹಾಗೂ ರಸಮಂಜರಿಕಾರ್ಯಕ್ರಮದ ಅಂಗವಾಗಿಬೆನಕನಕೊಪ್ಪ ಮತ್ತು ಚಿಕ್ಕನರಗುಂದಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲಸದಸ್ಯರನ್ನು ಸತ್ಕರಿಸಲಾಗಿದೆ.

ಕೆಪಿಸಿಸಿ ಸಂಯೋಜಕ ಡಾ.ಸಂಗಮೇಶ ಕೊಳ್ಳಿಯವರ ಹಾಗೂ ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ನೇತೃತ್ವದಲ್ಲಿ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ, ಉಪಾಧ್ಯಕ್ಷೆಮಲ್ಲವ್ವ ಮರೆಣ್ಣವರ, ಸದಸ್ಯರಾದಈರವ್ವ ಮುದಿಗೌಡ್ರ, ಶಂಕ್ರವ್ವಚಲವಾದಿ, ಶೋಭಾ ಕೋನಣ್ಣವರ, ಶರಣಬಸಪ್ಪ ಹಳೇಮನಿ,ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಶ್ರುತಿ ಬ್ಯಾಳಿ, ಬಾಪುಗೌಡ ಹಿರೇಗೌಡ್ರ,ಶಿವಯೋಗಿ ಭೂಮಣ್ಣವರ, ಪತ್ರಪ್ಪ ಭೂಮಣ್ಣವರ, ದುಂಡವ್ವಮರ್ಚಕ್ಕನವರ, ಬಸು ಭೂಮಣ್ಣವರಅವರನ್ನು ಸತ್ಕರಿಸಲಾಗಿದೆ.ಕಾರ್ಯಕ್ರಮದಲ್ಲಿ ಗ್ರಾಮದಎಲ್ಲ ಹಿರಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next